ಹೊಸ ದಿಗಂತ ಮಂಗಳೂರು:
ಪ್ರವಾಸಿಗರ ಆಕಷರಣೆಗೆ ಕಾರಣವಾಗಿರುವ ಪಳ್ಳಿಕೆರೆ ಬೇಕಲ ಕೋಟೆ ಬೀಚ್ನ ತೇಲುವ ಸೇತುವೆಯ ಸೇವೆಯನ್ನು ಅನಿರ್ದಿಷ್ಟಾವಧಿ ತನಕ ಸ್ಥಗಿತಗೊಳಿಸಲಾಗಿದೆ.
ಕೆರಳದಲ್ಲಿ ಸಮುದ್ರ ಪದೇ ಪದೇ ಪಕ್ಷುಬ್ದಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ತೇಲುವ ಸೇತುವೆ ಸೇವೆಯನ್ನು ಮುಂದಿನ ಸೂಚನೆ ಹೊರಬೀಳುವ ತನಕ ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ತಿಳಿಸಿದೆ.
ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮ ಸಾರಥ್ಯದಲ್ಲಿ ಈ ಸೇತುವೆ ಕಾರ್ಯಾನಿರ್ವಹಿಸುತ್ತಿದೆ.