ಪ್ಯಾರಡೈಸ್ ಬೀಚ್ ಬಳಿ ಟ್ರ್ಯಾಕಿಂಗೆ ತೆರಳಿ ನಾಪತ್ತೆಯಾಗಿದ್ದ ಪ್ರವಾಸಿಗರ ರಕ್ಷಣೆ

ಹೊಸ ದಿಗಂತ ವರದಿ, ಗೋಕರ್ಣ:

ಪ್ಯಾರಡೈಸ್ ಬೀಚ್ ಬಳಿ ಅರಣ್ಯ ಪ್ರದೇಶದಲ್ಲಿ ಟ್ರ್ಯಾಕಿಂಗೆ ತೆರಳಿ ನಾಪತ್ತೆಯಾಗಿದ್ದ ಪ್ರವಾಸಿಗರನ್ನು ಪೊಲೀಸ್ ತುರ್ತು ವಾಹನ 112 ಸಿಬ್ಬಂದಿಗಳು ರಕ್ಷಿಸಿದ ಘಟನೆ ಇಂದು ಸೋಮವಾರ ನಡೆದಿದೆ.

ಆಂಧ್ರ ಪ್ರದೇಶ ಮೂಲದ 13 ಜನರ ತಂಡ ಟ್ರಾಕಿಂಗ್ ಗೆ ತೆರಳಿದ್ದು ಈ ವೇಳೆ ಅರಣ್ಯ ಪ್ರದೇಶದಲ್ಲಿ ದಿಕ್ಕು ತಪ್ಪಿ ರಸ್ತೆ ಕಾಣದಾಗಿದ್ದು ತೊಂದರೆಯಲ್ಲಿ ಸಿಲುಕಿದ್ದರು. ಈ ವೇಳೆ ಟ್ರ್ಯಾಕಿಂಗ್ ಲೀಡರ್ ಶಿವಕುಮಾರ್ ಅವರು ತುರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಪೊಲೀಸ್ ತುರ್ತು ವಾಹನದವರು ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಾರೆ. ಟ್ರಾಕಿಂಗ್ ಲೀಡರ್ ಸೇರಿದಂತೆ ಹದಿಮೂರು ಜನರ ತಂಡವನ್ನು ರಕ್ಷಣೆ ಮಾಡಲಾಗಿದೆ. ಇ. ಆರ್. ಎಸ್. ಸಿಬ್ಬಂದಿಗಳಾದ ಮಹೇಶ್ ನಾಯ್ಕ, ಚಂದ್ರಶೇಖರ್ ನಾಯ್ಕ, ರವಿ ನಾಯ್ಕ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!