ಚಂದ್ರಬಾಬುಗೆ ಜನರ ಪ್ರಾಣ ಹುಲ್ಲು ಕಡ್ಡಿಗೆ ಸಮಾನ:ಆರ್‌ಜಿವಿ ಸೆನ್ಸೇಷನಲ್‌ ಕಮೆಂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿನಿಮಾ ವಿಮರ್ಶೆಯ ಹೊರತಾಗಿ ರಾಜಕೀಯ ಟೀಕೆಗಳಿಂದ ಸದಾ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಸೆನ್ಸೇಷನಲ್ ಕಮೆಂಟ್ ಮಾಡಿದ್ದಾರೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ರೋಡ್ ರ್ಯಾಲಿ ಶೋಗಳು ಮತ್ತು ಸಾರ್ವಜನಿಕ ಸಭೆಗಳ ಬಗ್ಗೆ ವಿವಾದವಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ನಡೆಸಿದ ಸಭೆಗಳಲ್ಲಿ ಸರಣಿ ಸಾವುಗಳು ದಾಖಲಾದ ಬಳಿಕ ವರ್ಮಾ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ.

ಚಂದ್ರಬಾಬು ನಾಯ್ಡು ಸರ್, ನಾನು ನಿಮಗೆ ಕೇಳುವ ನೇರ ಪ್ರಶ್ನೆ ಏನೆಂದರೆ ನೀವು ಮೂರು ಬಾರಿ ಅಥವಾ ಮುನ್ನೂರು ಬಾರಿ ಸಿಎಂ ಆಗಿ ಕೆಲಸ ಮಾಡಿರಬಹುದು. ಹಾಗಿರುವಾಗ ಜನ ಎಂದರೆ ಏನೆಂದು ನಿಮಗೆ ತಿಳಿದಿಲ್ಲವೇ? ಯಾವ ಸ್ಥಳದಲ್ಲಿ ಯಾವ ಕೆಲಸ ಮಾಡಿದರೆ ಎಂತಹ ಪರಿಸ್ಥಿತಿಗಳನ್ನು ಎದುರಿಸುತ್ತೀರಿ ಎಂದು ನಿಮಗೆ ತಿಳಿದಿಲ್ಲವೇ? ಮುಖ್ಯ ವಿಷಯವೆಂದರೆ ಜನರ ಪ್ರಾಣ ಅಂದರೆ ನಿಮಗೆ ಹುಲ್ಲು ಕಡ್ಡಿಗೆ ಸಮಾನದಂತಿದೆ. ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಜನರು ತಮ್ಮ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದೀರ.

ಅಲ್ಲದೇ ಗಿಫ್ಟ್ ಕೊಟ್ಟು ಲಂಚ ಕೊಡುವ ವಿಧಾನವನ್ನು ಪರಿಚಯ ಮಾಡಿಕೊಟ್ಟಿದ್ದೀರಿ ಎಂದು ಚಂದ್ರಬಾಬು ವಿರುದ್ಧ ಸಿಟ್ಟಿಗೆದ್ದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!