ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದು ಬೆಳಗ್ಗೆ ರಿಷಭ್ ಪಂತ್ ಅಪಘಾತ ವಿಚಾರ ತಿಳಿದು ಕ್ರೀಡಾಜಗತ್ತು ಆತಂಕಕ್ಕೀಡಾಗಿದೆ. ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂದಿರುಗುತ್ತಿದ್ದ ಪಂತ್ ಕಾರು ರಸ್ತೆಯಿಂದ ಆಚೆಗೆ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗಾರ್ಡ್ ಹಳಿಗಳಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರಿಷಬ್ ಪಂತ್ ತಮ್ಮ ಕಾರಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಗಾಯಗಳಿಂದಾಗಿ ಅದು ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಸಮೀಪದಲ್ಲೇ ಇದ್ದ ಕೆಲವರು ಬೆಂಕಿಹೊತ್ತಿ ಉರಿಯುತ್ತಿದ್ದ ಕಾರಿನ ಬಳಿಗೆ ಬಂದರು. ಅವರು ಕ್ರಿಕೆಟಿಗನಿಗೆ ಸಹಾಯ ಮಾಡುವ ಬದಲು ಕಾರಿನಲ್ಲಿದ್ದ ಬ್ಯಾಗ್ನಿಂದ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಈ ಮೂಲಕ ಹೃದಯ ವಿಹೀನತೆ ಮೆರೆದಿದ್ದಾರೆ ಪಾಪಿಗಳು. ಆ ಬಗ್ಗೆ ಲಕ್ಷ್ಯ ವಹಿಸದ ಪಂತ್ ಸ್ವತಃ ಕಿಟಕಿಯನ್ನು ಒಡೆದು ಕಾರಿನಿಂದ ಹೇಗೋ ಹೊರಬೀಳುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಕೊಂಚ ತಡವಾಗಿದ್ದರೂ ಪಂತ್ ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು. ಆಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಆ ಬಳಿಕ ಪಂತ್ ಸ್ವತಃ ತಾವೇ ಕಾಲ್ ಮಾಡಿ ಪೊಲೀಸ್ ಮತ್ತು ಆಂಬ್ಯುಲೆನ್ಸ್ನಿಂದ ಸಹಾಯವನ್ನು ಕೋರಿದ್ದಾರೆ. ಪಂತ್ ಅವರ ದೇಹದಾದ್ಯಂತ ಗಾಯಗಳಾಗಿದ್ದು, ತಲೆ, ಕಾಲು ಮತ್ತು ಮೂಗೇಟು ಬಿದ್ದಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ