ಹೊಸದಿಗಂತ ವರದಿ ಧಾರವಾಡ:
ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಜನರು ಮೃತಪಟ್ಟ ಘಟನೆ ತಾಲೂಕಿನ ಬಾಡ ಗ್ರಾಮದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಗೋವನಕೊಪ್ಪದ ಮಹೇಶ್ವರ ತೋಟದ(12), ನಿಗದಿ ಗ್ರಾಮದ ಶಿಲ್ಪಾ ದಾಸನಕೊಪ್ಪ (25), ನೀಲವ್ವ ದಾಸನಕೊಪ್ಪ (45), ಮಧುಶ್ರೀ ದಾಸನಕೊಪ್ಪ (19), ಹರೀಶ ಅಂಗಡಿ(12), ಶಂಭುಲಿಂಗಯ್ಯ ಹಿರೇಮಠ (35) ದೊಡ್ಡವಾಡ ಗ್ರಾಮದ ಅನುಶ್ರೀ ಹುತ್ತಮಲ್ಲವರ (14), ಚೆನ್ನವ್ವ ನಿಗದಿ(45) ಮತ್ತು ಮನುಶ್ರೀ ಬಸವರಾಜ ದಾಸನಕೊಪ್ಪ(16) ಮೃತ ದುರ್ದೈವಿಗಳು.
ಮದುವೆ ಹಿಂದಿನ ದಿನ ನಿಶ್ವಿತಾರ್ಥ ಮುಗಿಸಿ, ಮನಸೂರು ಗ್ರಾಮದಿಂದ ನಿಗದಿಗೆ ವಾಪಸ್ ಬರುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕೆ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಆರು ಜನ ಗಂಭೀರ ಗಾಯಗೊಂಡಿದ್ದು, ಧಾರವಾಡದ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ