ಉಬರ್ ಚಾಲಕಿಗೆ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ದರೋಡೆಕೋರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉಬರ್ ಚಾಲಕಿಯ ಮೇಲೆ ಇಬ್ಬರು ದರೋಡೆಕೋರರು ಹಲ್ಲೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.
ಪ್ರಿಯಾಂಕಾ ದೇವಿ (30) ಹಲ್ಲೆಗೊಳಗಾದ ಉಬರ್ ಡ್ರೈವರ್. ಜನವರಿ 9ರಂದು ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ಬ್ಬರು ದರೋಡೆಕೋರರು ಈಕೆಯ ಕುತ್ತಿಗೆಗೆ ಬಿಯರ್ ಬಾಟ್ಲಿಯಿಂದ ಹಲ್ಲೆಗೈದಿದ್ದಾರೆ .
ಘಟನೆ ನಡೆದ ತಕ್ಷಣವೇ ನನ್ನ ವಾಹನದಲ್ಲಿರುವ ಪ್ಯಾನಿಕ್ ಬಟನ್ ಒತ್ತಿದ್ದೇನೆ. ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಪ್ರಿಯಾಂಕಾ (Priyanka Devi) ಬೇಸರ ವ್ಯಕ್ತಪಡಿಸಿದ್ದಾರೆ.
ಆ ದಿನ ಮುಂಜಾನೆ 2.45ರ ಸುಮಾರಿಗೆ ಪ್ರಯಾಣಿಕರನ್ನು ಪಿಕಪ್ ಮಾಡಲೆಂದು ತೆರಳಿದೆ. ಸ್ಥಳಕ್ಕೆ ತೆರಳಿದಾಗ ಇಬ್ಬರು ನನ್ನ ಬಳಿ ಬಂದು ಮೊಬೈಲ್ ಫೋನ್, ಹಣ ಹಾಗೂ ಹಣ ಕೊಡುವಂತೆ ಪೀಡಿಸಿದ್ದಾರೆ. ಆದರೆ ಕೊಡಲು ನಿರಾಕರಿಸಿದಾಗ ನನ್ನ ಸ್ವಿಫ್ಟ್ ಡಿಸೈರ್ ಕಾರಿನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಓರ್ವ ಕೀ ನನ್ನ ಕೈಯಿಂದ ಎಳೆದುಕೊಂಡರೆ ಮತ್ತೊಬ್ಬ ಬಿಯರ್ ಬಾಟ್ಲಿಯಿಂದ ನನ್ನ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ನನ್ನ ಕುತ್ತಿಗೆಯಿಂದ ರಕ್ತ ಸುರಿಯಲು ಆರಂಭಿಸಿತ್ತು. ಈ ವೇಳೆ ನಾನು ಜೋರಾಗಿ ಕಿರುಚಿಕೊಂಡಿದ್ದರಿಂದ ಜನ ಸ್ಥಳಕ್ಕಾಗಮಿಸಿದರು. ಕೂಡಲೇ ಆರೋಪಿಗಳು ಪರಾರಿಯಾದರು ಎಂದು ಪ್ರಿಯಾಂಕ ಅಳಲು ತೋಡಿಕೊಂಡಿದ್ದಾರೆ.
ಪೊಲೀಸರಿಗೂ ವಿಷಯ ತಿಳಿ ಸಿದರೂ ಸ್ಥಳಕ್ಕೆ ಬರಲು 30 ನಿಮಿಷಗಳನ್ನು ತೆಗದುಕೊಂಡರು. ಅವರು ಸ್ಥಳಕ್ಕೆ ಬಂದ ಬಳಿಕ ಅಂಬುಲೆನ್ಸ್‍ಗೆ ಕರೆ ಮಾಡಿದರು. ಅದಾಗಲೇ ನನ್ನ ಬಳಿಯಿದ್ದ ಬಟ್ಟೆಯಿಂದ ರಕ್ತ ಸುರಿಯದಂತೆ ನನ್ನ ಕುತ್ತಿಗೆಯನ್ನು ಕಟ್ಟಿದ್ದೆ. ನಾನು ಮೂರ್ಛೆ ಹೋಗಲಿದ್ದೆ ಆದರೆ ನಾನು ಜಾಗೃತನಾಗಿರಬೇಕಾಗಿತ್ತು. ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!