ದರೋಡೆ ಪ್ರಕರಣ: ಅಗ್ನಿವೀರ್ ಸೇರಿದಂತೆ ಮೂವರು ಯುವಕರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಹಾಲಿ ಪೊಲೀಸರು ಕಾರು ಕಳ್ಳತನದ ಶಂಕೆಯ ಮೇರೆಗೆ ಅಗ್ನಿವೀರ್ ಸೇರಿದಂತೆ ಮೂವರು ಯುವಕರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಅಗ್ನಿವೀರ್ ಇಶ್ಮೀತ್ ಸಿಂಗ್, ಪ್ರಭುಪ್ರೀತ್ ಸಿಂಗ್ ಮತ್ತು ಬಾಲ್ಕರನ್ ಸಿಂಗ್ ಎಂದು ಗುರುತಿಸಲಾಗಿದೆ.

ಮೂರು ಆರೋಪಿಗಳು ಎರಡು ದಿನಗಳ ಹಿಂದೆ ಆಪ್ ಮೂಲಕ ವಾಹನವನ್ನು ಬುಕ್ ಮಾಡಿದ್ದರು. ಪೊಲೀಸರ ಪ್ರಕಾರ, ಚಾಲಕನತ್ತ ಗನ್ ತೋರಿಸಿ, ಆತನ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿ ಕಾರನ್ನು ಕದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿಗಳು ಕಾರು ಕಳ್ಳತನ ಮತ್ತು ಇತರ ಹಲವಾರು ಕಳ್ಳತನಗಳಲ್ಲಿ ಭಾಗಿಯಾಗಿದ್ದಾರೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಯಿಂದ ಕಳ್ಳತನವಾದ ಕಂಟ್ರಿಮೇಡ್ ಪಿಸ್ತೂಲ್, ಸ್ಕೂಟರ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!