ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಮಾಗುಂಟ ರಾಘವರೆಡ್ಡಿ ಅವರ ಕಸ್ಟಡಿಯನ್ನು ರೋಸ್ ಅವೆನ್ಯೂ ನ್ಯಾಯಾಲಯ ವಿಸ್ತರಿಸಿದೆ. ಮಾಗುಂಟ ರಾಘವರೆಡ್ಡಿ ಅವರ ನ್ಯಾಯಾಂಗ ಬಂಧನವನ್ನು ಮಾರ್ಚ್ 28ರವರೆಗೆ ವಿಸ್ತರಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಕಾರಣ ಇಡಿ ಮಾಗುಂಟ ರಾಘವರೆಡ್ಡಿ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರ್ಟ್ ಆದೇಶಿಸಿದೆ.
ಮಾಗುಂಟನ ನ್ಯಾಯಾಂಗ ಬಂಧನ ವಿಸ್ತರಣೆಗೆ ಹಸಿರು ನಿಶಾನೆ ತೋರಿದೆ. ಸದ್ಯ ಮಾಗುಂಟ ರಾಘವರೆಡ್ಡಿ ತಿಹಾರ್ ಜೈಲಿನಲ್ಲಿದ್ದು, ಫೆಬ್ರವರಿ 10ರಂದು ಇಡಿ ಮಾಗುಂಟ ಅವರನ್ನು ಬಂಧಿಸಿತ್ತು. ಮತ್ತೊಂದೆಡೆ, ರಾಘವ ಅವರ ತಂದೆ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ ಅವರು ಶನಿವಾರ ಇಡಿ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಇಡಿಗೆ ಪತ್ರ ಬರೆದಿದ್ದಾರೆ.