ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೆಸ್ಸೆಸ್ ಪೂರ್ವ ಪ್ರಚಾರಕ್, ಹಿರಿಯ ಸ್ವಯಂ ಸೇವಕ ಇಚ್ಲಂಗೋಡು ಗೋಳಿತ್ತಡಿ ಅಕ್ಕಾರಿ ಹಿತ್ಲು ರಾಧಾಕೃಷ್ಣ ಶೆಟ್ಟಿ (64) ಅಲ್ಪಕಾಲದ ಅಸೌಖ್ಯದಿಂದ ಇಂದು ವಿಧಿವಶರಾಗಿದ್ದಾರೆ.
ಇವರು ಇಚ್ಲಂಗೋಡು ಶ್ರೀ ಮಹಾಗಣಪತಿ ಮಹಾವಿಷ್ಣು ಸದಾಶಿವ ದೇವಸ್ಥಾನದ ಆಡಳಿತ, ಜೀರ್ಣೋದ್ಧಾರ ಸಮಿತಿಗಳಲ್ಲಿ ಪದಾಧಿಕಾರಿಯಾಗಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಸಮಾಜಮುಖಿಯಾಗಿದ್ದರು.
ಮೃತರು ಪತ್ನಿ ಗೀತಾ, ಸುಪುತ್ರರಾದ ರಾಕೇಶ್, ರಕ್ಷಿತ್ ಸೊಸೆ, ಮೊಮ್ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.