CINE| ನ್ಯಾಷನಲ್‌ ಅವಾರ್ಡ್‌ ಬಗ್ಗೆ ನಿರ್ದೇಶಕ ಸಂದೀಪ್ ವಂಗಾ ಕಮೆಂಟ್ಸ್‌ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ‘ಆನಿಮಲ್’ ಚಿತ್ರದ ಮೂಲಕ‌ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರದ ಭಾಗವಾಗಿ ಕಾರ್ಯಕ್ರಮಗಳು ಮತ್ತು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.

ಸಂದೀಪ್ ವಂಗಾ ಇತ್ತೀಚೆಗೆ ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನ್ಯಾಷನಲ್‌ ಅವಾರ್ಡ್‌ ಕುರಿತು ಮಾಡಿರುವ ಕಮೆಂಟ್ಸ್‌ ಸದ್ಯ ವೈರಲ್‌ ಆಗುತ್ತಿವೆ.

ಅಲ್ಲು ಅರ್ಜುನ್ ಅವರಿಗೆ ಸಿಕ್ಕಿರುವ ರಾಷ್ಟ್ರಪ್ರಶಸ್ತಿ ಬಗ್ಗೆ ಮಾತನಾಡಿರುವ ಅವರು, ʻಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿ ದೊರಕಿರುವುದು ಖುಚಿ ತಂದರೂ, 69 ವರ್ಷಗಳಲ್ಲಿ ಈ ಪ್ರಶಸ್ತಿ ಯಾವೊಬ್ಬ ನಟನಿಗೂ ಯಾಕೆ ಬರಲಿಲ್ಲ.  ಬಹುಶಃ ರಾಷ್ಟ್ರ ಪ್ರಶಸ್ತಿಯನ್ನು ಲಘುವಾಗಿ ಪರಿಗಣಿಸಿರಬಹುದು ಇಲ್ಲ ಅದಕ್ಕೆ ಸರಿಯಾಗಿ ಅರ್ಜಿ ಹಾಕದೇ ಇರಬಹುದು ಕಾರಣವಾಗಿರಬಹುದುʼ ಎಂದು ಸಂದೀಪ್ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!