ಸತೀಶ ಜಾರಕಿಹೊಳಿಗೆ ಅಂತ್ಯ ಕಾಲ ಬಂದಿದೆ: ಯತ್ನಾಳ ವಾಗ್ದಾಳಿ

ಹೊಸದಿಗಂತ ವರದಿ ವಿಜಯಪುರ:
ಸತೀಶ ಜಾರಕಿಹೊಳಿಗೆ ಅಂತ್ಯ ಕಾಲ ಬಂದಿದೆ. ಅದಕ್ಕಾಗಿ ಹಿಂಗೆಲ್ಲ ಮಾಡುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಸತೀಶ ಜಾರಕಿಹೊಳಿ ಮತಕ್ಷೇತ್ರ ಬಿಹಾರ ರಾಜ್ಯದಂತೆ ಆಗಿದೆ. ಸತೀಶ ಜಾರಕಿಹೊಳಿ ನನಗೆ ನೀ‌.. ಹೆಂಗ್ ಗೋಕಾಕ ಬರ್ತೀಯಾ ಸವಾಲ್ ಹಾಕಿದ್ದರು. ಅದಕ್ಕಾಗಿ ಸವಾಲ್ ಸ್ವೀಕರಿಸಿ ಗೋಕಾಕಗೆ ಹೋಗಿದ್ದೆ ಎಂದರು.
ಆ ಮತಕ್ಷೇತ್ರಕ್ಕೆ ಹೋಗೋಕೆ ಯಾರಿಗೂ ಧಮ್ ಇಲ್ಲ ಎನ್ನುವ ರೀತಿ ಆಗಿತ್ತು. ಗೋಕಾಕ್ ನಲ್ಲಿ ಶಾಸಕ ಸತೀಶ ಜಾರಕಿಹೊಳಿದೇ ಸಾಮ್ರಾಜ್ಯ ಆಗಿತ್ತು ಎಂದು ಟೀಕಾಪ್ರಹಾರ ನಡೆಸಿದರು. ಸಾಮರ್ಥ್ಯ ಇದರೆ ವಿಜಯಪುರ ನಗರ ಮತಕ್ಷೇತ್ರದಿಂದ ನಿಲ್ಲು ಎಂದು ಹೇಳಿನಿ ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.
ಶಿವಾನಂದ ಪಾಟೀಲ ಮುಸ್ಲಿಂ ಅಭಿಮಾನ ಎಲ್ಲಿ ಹೋಯ್ತು. ಮುಸ್ಲಿಂರನ್ನು ಶಾಸಕ ಮಾಡುತ್ತೇನೆ ಎಂದು ಕುಣಿದಾಡುತ್ತಿದ್ದ ಶಿವಾನಂದ ಪಾಟೀಲ ಈಗ ಯಾಕೆ ಟಿಕೆಟ್ ಕೇಳಿದ್ದಾರೆ ಎಂಬುದನ್ನು ಅವರೇ ಹೇಳಬೇಕು ಎಂದರು.
ಸಿದ್ದರಾಮಯ್ಯ ಮತಕ್ಷೇತ್ರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಶ್ರೀಪಾದವೇ ಗತಿ ಎಂದು ಕೊಲ್ಹಾರಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!