ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಚಿನ್ನದ ಪದಕದ ರೇಸ್ನಿಂದ ಹೊರಬಿದ್ದಿದೆ.
ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ಗೆ ಹೋದಾಗ ವಿವಾದಕ್ಕೆ ಸಿಲುಕಿದ್ದು, ಗಡಿಯಾರಕ್ಕೆ ಸಂಬಂಧಿಸಿದ ವಿವಾದದಿಂದಾಗಿ ಆಸ್ಟ್ರೇಲಿಯಾಕ್ಕೆ ಲಾಭವಾಯಿತು ಮತ್ತು ಟೀಂ ಇಂಡಿಯಾ ಸೋಲು ಅನುಭವಿಸಿತು.
Penalty miss hua Australia se and the Umpire says, Sorry Clock start nahi hua. Such biasedness used to happen in cricket as well earlier till we became a superpower, Hockey mein bhi hum jald banenge and all clocks will start on time. Proud of our girls 🇮🇳pic.twitter.com/mqxJfX0RDq
— Virender Sehwag (@virendersehwag) August 6, 2022
ಈ ಸೋಲಿನ ನಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಎಫ್ಐಎಚ್ ವಿರುದ್ಧ ನಿರಂತರ ವಾಗ್ದಾಳಿ ನಡೆಯುತ್ತಿದೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ವೀರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಕಿಡಿಕಾರಿದ್ದು, ‘ಆಸ್ಟ್ರೇಲಿಯಾದಿಂದ ಪೆನಾಲ್ಟಿ ತಪ್ಪಿಹೋಯಿತು ಮತ್ತು ಅಂಪೈರ್ಗಳು ಕ್ಷಮಿಸಿ ಗಡಿಯಾರ ಪ್ರಾರಂಭವಾಗಲಿಲ್ಲ ಎಂದು ಹೇಳಿದರು. ನಾವು ಕ್ರಿಕೆಟ್ನಲ್ಲಿ ಸೂಪರ್ ಪವರ್ಗಳಾಗಿರದಿದ್ರೆ, ಕ್ರಿಕೆಟ್ನಲ್ಲಿಯೂ ಅದು ಸಂಭವಿಸುತ್ತಿತ್ತು. ಹಾಕಿ ಕೂಡ ಶೀಘ್ರದಲ್ಲೇ ಸೂಪರ್ ಪವರ್ ಮಾಡಲಾಗುವುದು ಮತ್ತು ಎಲ್ಲಾ ಗಡಿಯಾರಗಳು ಸಮಯಕ್ಕೆ ಪ್ರಾರಂಭವಾಗುತ್ತವೆ. ನಮ್ಮ ಹುಡುಗಿಯರ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ.
ಎಫ್ಐಎಚ್ ಕ್ಷಮೆಯಾಚಿಸಿ, ವಿಚಾರಣೆಗೆ ಆದೇಶ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ ಸೆಮಿಫೈನಲ್ ಸೋಲಿನ ಸಂದರ್ಭದಲ್ಲಿ ಗಡಿಯಾರಕ್ಕೆ ಸಂಬಂಧಿಸಿದ ವಿವಾದಕ್ಕಾಗಿ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಕ್ಷಮೆಯಾಚಿಸಿದೆ. ಇದರೊಂದಿಗೆ ಎಫ್ಐಎಚ್ ತನಿಖೆಗೂ ಆದೇಶಿಸಿದೆ.
‘ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಸೆಮಿ-ಫೈನಲ್ ಪಂದ್ಯದಲ್ಲಿ ಆಕಸ್ಮಿಕವಾಗಿ ಶೂಟೌಟ್ ಪ್ರಾರಂಭವಾಯಿತು (ಗಡಿಯಾರ ಕಾರ್ಯನಿರ್ವಹಿಸಲು ಸಿದ್ಧವಾಗಿಲ್ಲ) ನಾವು ಕ್ಷಮೆಯಾಚಿಸುತ್ತೇವೆ’ ಎಂದು ಎಫ್ಐಎಚ್ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಪೆನಾಲ್ಟಿ ಶೂಟೌಟ್ ತೆಗೆದುಕೊಳ್ಳುವ ಪ್ರಕ್ರಿಯೆ ನಡೆದಿದೆ ಮತ್ತು ಅದನ್ನ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.