ಹೊಸದಿಗಂತ ವರದಿ, ಕುಶಾಲನಗರ:
ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಎರಡು ಸಾಕಾನೆಗಳು ಶನಿವಾರ ಮೈಸೂರಿಗೆ ತೆರಳಿವೆ.
ಮೊದಲ ಹಂತದಲ್ಲಿ ವಿಕ್ರಮ ಮತ್ತು ಧನಂಜಯ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಣ್ಯಾಧಿಕಾರಿಗಳು ಬೀಳ್ಕೊಟ್ಟರು. ಮಾಲ್ದಾರೆ ಮೂಲಕ ಮಾವುತ,ಕಾವಾಡಿಗರೊಂದಿಗೆ ವೀರನಹೊಸಳ್ಳಿಯತ್ತ ಸಾಕಾನೆಗಳು ಲಾರಿ ಮೂಲಕ ತೆರಳಿದವು.
ಎರಡನೇ ಹಂತದಲ್ಲಿ ಗೋಪಿ, ಶ್ರೀರಾಮ, ವಿಜಯ, ಬದಲಿ ವ್ಯವಸ್ಥೆಗೆ ಹೆಚ್ಚುವರಿಯಾಗಿ ಸುಗ್ರೀವ ಆನೆಗಳು ತೆರಳಲಿವೆ.