ಗಾಂಜಾ ಮಾರಾಟ: ‘ಚಿಟ್ಟೆ’ ಸಹಿತ ನಾಲ್ವರು ಪೊಲೀಸರ ವಶಕ್ಕೆ

ಹೊಸ ದಿಗಂತ ವರದಿ , ಶಿವಮೊಗ್ಗ:

ಅನುಪಿನಕಟ್ಟೆಯ ತುಂಗಾ ಮೇಲ್ದಂಡೆ ಚಾನೆಲ್ ಬಳಿಯ ಸೇತುವೆ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಿತಿನ್‌ಕುಮಾರ್ ಅಲಿಯಾಸ್ ಚಿಟ್ಟೆ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 30 ಸಾವಿರ ರೂ. ವೌಲ್ಯದ 1.250 ಗ್ರಾಂ ಒಣ ಗಾಂಜಾ, 450 ರೂ. ನಗದು, 02 ಬೈಕ್, ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ತುಂಗಾನಗರ ಠಾಣಾ ವ್ಯಾಪ್ತಿಯ ಅನುಪಿನಕಟ್ಟೆ ತುಂಗಾ ಚಾನೆಲ್ ಸೇತುವೆ ಹತ್ತಿರ ಗಾಂಜಾ ಮಾರುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಇಎನ್ ಠಾಣೆ ಪಿಎಸ್‌ಐ ಭರತ್‌ಕುಮಾರ್ ಮತ್ತು ತಂಡದವರು ದಾಳಿ ನಡೆಸಿದರು. ಈ ವೇಳೆ ಬೊಮ್ಮನಕಟ್ಟೆ ಸರ್ವಜ್ನ ನಗರ ವಾಸಿ ನಿತಿನ್‌ಕುಮಾರ್ ಅಲಿಯಾಸ್ ಚಿಟ್ಟೆ (29), ರಾಗಿಗುಡ್ಡ ನಿವಾಸಿ ಸಕ್ಲೈನ್ (22), ಆರ್‌ಎಂಎಲ್ ನಗರದ ಸಮೀರ್(23) ಹಾಗೂ ಆಗುಂಬೆ ಸಮೀಪದ ಶಿವರಾಜಪುರದ ಸಂಜಯ್(24) ಅವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!