44 ವರ್ಷಗಳ ಕಾಲ ಶಾಖಾ ಅಂಚೆ ಪಾಲಕರಾಗಿ ಸೇವೆ: ಕುಶಾಲಪ್ಪ ಗೌಡರಿಗೆ ಬೀಳ್ಕೊಡುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಅಂಚೆ ಇಲಾಖೆ,ಬಂಟ್ವಾಳ ಉಪ ವಿಭಾಗದ ಸಾಲೆತ್ತೂರು ಶಾಖಾ ಅಂಚೆ ಕಚೇರಿಯಲ್ಲಿ ಸುಮಾರು 44 ವರ್ಷಗಳ ಕಾಲ ಶಾಖಾ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿರಾದ ಕುಶಾಲಪ್ಪ ಗೌಡ ಕಾರಜೆ ಇವರಿಗೆ ಮಂಚಿ ಉಪಅಂಚೆ ಕಚೇರಿ ಮತ್ತು ಶಾಖಾ ಅಂಚೆ ಕಚೇರಿ ಸಿಬ್ಬಂದಿ ಗಳಿಂದ ಗೌರವ ಪೂರಕವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು.
ಅದೇ ರೀತಿ ಉಪ ಅಂಚೆ ಕಚೇರಿ, ಶಾಖಾ ಅಂಚೆ  ಕಚೇರಿಂದ ಬೇರೆ ಕಡೆಗೆ ವರ್ಗಾವಣೆಗೊಂಡ ಸಿಬ್ಬಂದಿಗಳನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ವೇದಿಕೆಯಲ್ಲಿ ಉಪ ಅಂಚೆ ಅಧೀಕ್ಷಕರಾದ ಲೋಕನಾಥ (ASPost), ಬಾಲಕೃಷ್ಣ ರೈ ಕೊಲ್ಲಡಿ, ಮಂಚಿ ಉಪ ಅಂಚೆ ಪಾಲಕಿಯಾದ ವಿಜಯಲಕ್ಷಿ ಮತ್ತು ಇತರರು ಉಪಸ್ಥಿತರಿದ್ದರು.
ಸುರೇಶ್ ರೈ. ಡಿ ಸ್ವಾಗತಿಸಿ, ಅಭಿಲಾಶ್ ಕಾರ್ಯಕ್ರಮ ನಿರೂಪಿಸಿದರು, ಅಶೋಕ ಮಂಚಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!