ಹೊಸದಿಗಂತ ವರದಿ, ಮುಂಡಗೋಡ:
ಹಿತ್ತಲಿನಲ್ಲಿದ್ದ ನಿಲಗೇರಿ ಮರಕ್ಕೆ ಜೋರಾಗಿ ಹೊಡೆದ ಮಿಂಚು ಸಿಡಿಲಿಗೆ ಮನೆಯಲ್ಲಿದ್ದ ಮಕ್ಕಳು ಸೇರಿ ಏಳು ಜನರ ಕಿವಿಯ ತಮಟೆಗೆ ಪೆಟ್ಟು ಬಿದ್ದು ಕಿವಿ ಕೇಳದಂತಾಗಿದ್ದು, ನಾಲ್ಕು ಮನೆಗಳ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗದ ಘಟನೆ ಜರುಗಿದೆ.
ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಪೂರ ಗ್ರಾಮದಲ್ಲಿ ಶನಿವಾತ ರಾತ್ರಿ ಬಾರಿ ಪ್ರಮಾಣದ ಗುಡುಗು, ಮಿಂಚು, ಗಾಳಿ ಸಹಿತ ಜೋರಾದ ಮಳೆಗೆ ದಾದಾಫೀರ ಎಂಬುವರ ಮನೆಯ ಹಿತ್ತಲಿನಲ್ಲಿರುವ ನಿಲಗೇರಿ ಮರಕ್ಕೆ ಸಿಡಿಲು ಬಡಿದು ಮರ ಸುಟ್ಟಿದ್ದಲ್ಲದೆ ಮನೆಯಲ್ಲಿದ್ದ ನಾಲ್ಕು ಮಕ್ಕಳು ಸೇರಿ ಏಳು ಜನರ ಕಿವಿ ತಮಟೆಗೆ ಪೆಟ್ಟು ಬಿದ್ದು ಕಿವಿ ಕೆಳದಂತಾಗಿದೆ.
ಸುತ್ತಮುತ್ತಲಿನಲ್ಲಿರು ನಾಲ್ಕು ಮನೆಗಳ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಮನೆಯಲ್ಲಿದ್ದ ಎಲಿಕ್ಟ್ರಾನಿಕ ಉಪಕರಣಗಳು ಸೇರಿದಂತೆ ವಿದ್ಯುತ್ ತಂತಿ ಮನೆಗೆ ಅಳವಡಿಸಿದ ವಾಯರಗಳು ಸುಟ್ಟು ಭಸ್ಮವಾಗಿವೆ ರಂದು ದಾದಾಫೀರ ಹೇಳಿದರು.