ದಿಗಂತ ವರದಿ ಧಾರವಾಡ:
ಚುನಾವಣಾ ಆಯೋಗ ಮನೆ ಮತದಾನಕ್ಕೆ ಅವಕಾಶ ನೀಡಿದ ಹಿನ್ನಲೆ ಗುರುವಾರ ಕಮಲಾಪುರದ ಶತಾಯುಷಿ ಶಂಕ್ರವ್ವ ಕಲಘಟಗಿ (100) ಮತ ಚಲಾಯಿಸಿದರು.
ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡಿದ ಸೆಕ್ಟರ್ ಅಧಿಕಾರಿಗಳ ತಂಡ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗೆ ಹಕ್ಕು ಚಲಾವಣೆಗೆ ಅವಕಾಶ ಮಾಡಿಕೊಟ್ಟರು.
ಕಮಲಾಪೂರದ ಉಳವಪ್ಪ ಸತ್ತೆಣ್ಣವರ (86) ಹಿರಿಯ ನಾಗರಿಕ ಸಹ ಮತ ಚಲಾವಣೆ ಮಾಡಿದರು. ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.