ವಿಧಾನಸೌಧವನ್ನು ಸಂಪೂರ್ಣ ರಾಡಿ ಮಾಡಿ ಹೋಗಿದ್ದು ಕಾಂಗ್ರೆಸ್: ಡಿಕೆಶಿಗೆ ಶೆಟ್ಟರ್‌ ಕೌಂಟರ್

ಹೊಸದಿಗಂತ ವರದಿ ಹುಬ್ಬಳ್ಳಿ:

ವಿಧಾನ ಸೌಧವನ್ನು ಸಂಪೂರ್ಣ ರಾಡಿ ಮಾಡಿ ಹೋಗಿದ್ದು ಕಾಂಗ್ರೆಸ್. ಅದನ್ನೇ ಸರಿಪಡಿಸಲು ನಮಗೆ ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಕ್ರೋಶ ಹೊರಹಾಕಿದರು. ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ವಿಧಾನಸೌಧ ಬಿಜೆಪಿಯಿಂದ ಕಳಂಕ ಅಂಟಿಕೊಂಡಿದ್ದು ಗೋಮೂತ್ರ ಹಾಕಿ ಶುದ್ಧಗೊಳಿಸುತ್ತೇವೆ ಎಂಬ ಹೇಳಿಕೆಗೆ ಕೌಂಟರ್‌ ಕೊಟ್ಟಿದ್ದಾರೆ.

ಆರ್ಕಾವತಿ ಜಮೀನಿ ಡಿನೋಟಿಪಿಕೇಶನ್ 900 ಕೋಟಿ ಹಗರಣ ಮಾಡಿ ರಾಜ್ಯದಲ್ಲಿ ರಾಡಿ ಮಾಡಿದವರು ಕಾಂಗ್ರೆಸ್. ವಿರೋಧ ಪಕ್ಷದ ನಾಯಕನಾಗಿದ್ದಾಗ ಎಲ್ಲವನ್ನು ಹೊರ ತಂದಿದೆ.‌ ಇಷ್ಟೆಲ್ಲಾ ಆದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಇದರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಹರಿಹಾಯ್ದರು.

ಸುಮ್ಮನೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸುವುದು ಹಾಗೂ ಪ್ರಚಾರ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಚುನಾವಣೆ ಸಮೀಪಿಸುತ್ತಿರುವುದರಿಂದ ಗಿಮಿಕ್ ಮಾಡುತಿದ್ದಾರೆ. ಅದರಲ್ಲಿ ಅರ್ಥವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬುಧವಾರ ರಮೇಶ ಜಾರಕಿಹೊಳಿ ವಿರೋಧ ಪ್ರಕರಣ ದಾಖಲಿಸಿರುವುದರ ಕುರಿತು ಪ್ರತಿಕ್ರಿಯಿಸಿದರು.

ಜನ ನಾಯಕರ ವಿರುದ್ದ ಪ್ರಕರಣ ದಾಖಲಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಹಿಂದೆ ಚುನಾವಣೆ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಬೆಳಗಾವಿಯಲ್ಲಿ ಬಹಿರಂಗವಾಗಿ ಕುಕ್ಕ ಹಂಚುತ್ತಿದ್ದಾರೆ. ಚುನಾವಣೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನವರಿಗೆ ಇದೆಯಾ ಎಂದು ಪ್ರಶ್ನಿಸಿದರು‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!