ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಸೇನೆಯಿಂದ ಬಂಡಾಯವೆದ್ದ ಶಾಸಕರಲ್ಲೊಬ್ಬರು ತಮ್ಮ ಬಂಡಾಯದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಒಂದು ಕಾಲದಲ್ಲಿ ಬದ್ಧವೈರಿಗಳಾಗಿದ್ದ ಪಕ್ಷದವರೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಸ್ವಪಕ್ಷದಲ್ಲಿ ಅವರಿಗಾದ ಮುಜುಗರ, ಅವಮಾನಗಳನ್ನು ತಮ್ಮ ಪತ್ರವೊಂದರಲ್ಲಿ ಔರಂಗಾಬಾದ್ ಶಾಸಕ ಸಂಜಯ್ ಶಿರ್ಸಾಟ್ ಬಹಿರಂಗ ಪಡಿಸಿದ್ದಾರೆ.