ಹೊಸದಿಗಂತ ವರದಿ, ಹಳಿಯಾಳ:
ಅನ್ಯಕೋಮಿನ ಯುವಕನಿಂದ ಛತ್ರಪತಿ ಶಿವಾಜಿ ಚಿತ್ರವನ್ನು ಆಶ್ಲೀಲವಾಗಿ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ
ಆಪಾದಿತ ಅಪ್ರಾಪ್ತ ವಯಸ್ಸಿನ ಯುವಕ ಎಂಬವನನ್ನು ಶನಿವಾರ ಹಳಿಯಾಳ ಪೋಲಿಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರ ನಿವಾಸಿಯಾಗಿರುವ ಈತನನ್ನು ಮಹಾರಾಷ್ಟ್ರದಿಂದ ಯುವಕನನ್ನು ವಶಕ್ಕೆ ಪಡೆದಿರುವ ಹಳಿಯಾಳ ಪೊಲೀಸರು.
ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ತಾನು ಮೊಬೈಲ್ ರಿಪೇರಿಗೆ ಕೊಟ್ಟಿದ್ದೆ, ಪೋಸ್ಟ್ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದು. ಯುವಕನ ಹೇಳಿಕೆಯ ನೈಜತೆ ಸಾಭೀತು ಪಡಿಸಲು ಎಫ್ಎಸ್ಎಲ್ ರಿಪೋರ್ಟ್ ಮೂಲಕ ಯುಆರ್ಎಲ್ ಪರೀಕ್ಷೆಗೆ ಪೋಲಿಸರು ಕಳುಹಿಸಿದ್ದು ಯುಆರ್ಎಲ್ ಪರೀಕ್ಷೆಯ ಫಲಿತಾಂಶದ ನಂತರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಸಿಂಹಪಾಲು ಮರಾಠಾ ಸಮುದಾಯವನ್ನು ಹೊಂದಿರುವ ಹಳಿಯಾಳದಲ್ಲಿ ಮರಾಠಾ ಸಮಯದಾಯಕ್ಕೆ ಶಿವಾಜಿ ಮಹಾರಾಜರು ಆರಾಧ್ಯ ದೈವವೇ ಸರಿ ಇಂತಹ ಕ್ಷೇತ್ರದಲ್ಲಿ ಅನ್ಯಕೋಮಿನ ಯುವಕರಿಂದ ಮೆಲಿಂದ ಮೆಲೆ ಇಂತಹ ಘಟನೆ ನಡೆಯುತ್ತಿರುವುದು ಹಿಂದೂಗಳನ್ನು ಕೆರಳಿಸಿದೆ ಅಲ್ಲದೇ ಇತ್ತೀಚೆಗಷ್ಟೆ ತತ್ವಣಗಿ ಗ್ರಾಮದ ಅನ್ಯಕೋಮಿನ ಯುವಕ ಕೃತ್ಯ ಎಸಗಿದ್ದ ಆತನಿಗೆ ಗ್ರಾಮದವರು ಧರ್ಮದೇಟು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.