ಇನ್ಫೋಸಿಸ್ ಸುಧಾಮೂರ್ತಿ ರಾಷ್ಟ್ರಪತಿಗಳಾಗಿ ನೇಮಕಗೊಳ್ಳಲಿ: ಗೈಡ್ಸ್ ಗಳಿಂದ ಹಂಪಿಯಲ್ಲಿ ವಿಶೇಷ ಪೂಜೆ

ಹೊಸದಿಗಂತ ವರದಿ,ವಿಜಯನಗರ:

ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ರಾಷ್ಟ್ರಪತಿಗಳಾಗಿ ನೇಮಕಗೊಂಡು ನಾಡಿನ ಜನರ ದನಿಯಾಗಿ ಕೆಲಸ‌ ನಿರ್ವಹಿಸಲಿ ಎಂದು ಪ್ರಾರ್ಥಿಸಿ ವಿಶ್ವಪ್ರಸಿದ್ಧ ಹಂಪಿಯ ಶ್ರೀ ವಿರುಪಾಕ್ಷೇಶ್ವರ ಸನ್ನಿಧಿಯಲ್ಲಿ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಗುರುವಾರ ವಿಶೇಷ ಪೂಜೆ ಅರ್ಚನೆ ಸಲ್ಲಿಸುವ ಮೂಲಕ ಗಮನಸೆಳೆದಿದ್ದಾರೆ.
ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಗೋಪಾಲ್ ಅವರು ಮಾತನಾಡಿ, ವಿದ್ಯಾವಂತ ಲಕ್ಷಾಂತರ ಯುವಕ, ಯುವತೀಯರಿಗೆ ಉದ್ಯೋಗ ನೀಡಿ, ಸಮಾಜ ಮುಖಿಯುಳ್ಳ ನಾನಾ ಕೆಲಸಗಳನ್ನು ಮಾಡುವ ಮೂಲಕ ದೇಶವಷ್ಟೇ ಅಲ್ಲ, ರಾಷ್ಟ್ರದ ಗಮನಸೆಳೆದ ಇನ್ಫೋಸಿಸ್ ಮುಖ್ಯಸ್ಥೆ ರಾಷ್ಟ್ರಪತಿಗಳಾಗಿ ನೇಮಕವಾಗಬೇಕು ಎಂದು ಪ್ರಸಿದ್ಧ ಕ್ಷೇತ್ರ ಶ್ರೀ ವಿರುಪಾಕ್ಷೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಲಾಗಿದೆ.
ಕೊರೋನಾ ಸಂಕಷ್ಟದಲ್ಲಿ ನಮ್ಮ ಗೈಡ್ಸ್ ಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ನಮ್ಮನ್ನು ಕೈಹಿಡಿದಿದ್ದರು. ಪ್ರಸ್ತುತ ದಿನಗಳಲ್ಲಿ ಎಲ್ಲರ ಬಳಿಯೂ ಹಣವಿದೆ. ಆದರೇ, ಸಹಾಯ ಮಾಡುವ ಮನಸ್ಸಿರಬೇಕು, ಸುಧಾ ಮೂರ್ತಿ ಅವರ ಬಳಿ ಸಾಕಷ್ಟು ಹಣವಿದೆ, ಇಲ್ಲಿವರೆಗೆ ಅವರ ಸರಳ ಜೀವನ ಇತರರಿಗೆ ಮಾದರಿಯಾಗಿದೆ. ಸೌಮ್ಯ ಸ್ವಭಾವ, ಸ್ವಲ್ಪನೂ ಗರ್ವವಿಲ್ಲ, ಅಂತಹ ಸರಳ ಸಜ್ಜನಿಕೆ ಉದ್ಯಮಿಯನ್ನು ಇಲ್ಲಿವರೆಗೂ ನಾವು ನೋಡಿಲ್ಲ, ಕಷ್ಟದಲ್ಲಿ ಇರುವವರನ್ನು ಗುರುತಿಸಿ ನೆರವಾಗುವ ಸಂಸ್ಕೃತಿ, ಸ್ವಭಾವ ಅವರದ್ದು, ಇಂತರ ಸರಳತೆಯುಳ್ಳ, ಜ್ಞಾನವುಳ್ಳವರು ರಾಷ್ಟ್ರಪತಿಗಳಾಗಿ ನೇಮಕಗೊಂಡರೇ ದೇಶ ನಾನಾ ರೀತಿಯಲ್ಲಿ ಇನ್ನೂ ಅಭಿವೃದ್ಧಿ ಹೊಂದಲಿದೆ, ಇದು ಪೂಜೆಯಲ್ಲ, ನಮ್ಮೆಲ್ಲರ ಹರಕೆ ಎಂದರು.
ನಾವಷ್ಟೇ ಅಲ್ಲ ದೇಶದ‌ ಅತ್ತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಗೆ ಸುಧಾ ಮೂರ್ತಿ ಅವರನ್ನು ಆಯ್ಕೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಸುಧಾ ಮೂರ್ತಿ ಅವರ ಹೆಸರು ಮುಂಚೂಣಿಯಲ್ಲಿದೆ. ಅವರ ಆಯ್ಕೆಗೆ ಯಾವುದೇ ರೀತಿಯ ಅಡ್ಡಿ ಎದುರಾಗದೇ ಇರಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ, ನಿರ್ಸೇಶಕರಾದ ಎಚ್.ಹುಲಗಪ್ಪ, ಮಲ್ಲಿಕಾರ್ಜುನ್ ಸ್ವಾಮೀ, ಮಂಜುನಾಥ ಗೌಡ, ದೇವರಾಜ್, ಹುಸೇನ್ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!