ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇರಳದಲ್ಲಿ ಎರಡು ಹಂದಿ ಪ್ರಕರಣಗಳು ವರದಿಯಾಗಿದೆ. ವಯನಾಡ್, ಕಣ್ಣೂರಿನಲ್ಲಿ ಕೇಸ್ಗಳು ದೃಢಪಟ್ಟಿವೆ.
ಈಗಾಗಲೇ ಪಶುಸಂಗೋಪನಾ ಇಲಾಖೆ ವೈರಸ್ ಹರಡುವ ಬಗ್ಗೆ ಎಚ್ಚರಿಕೆ ನೀಡಿದ್ದು, ವಯನಾಡಿನ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರಾಜೇಶ್ ಅವರು, ಸುಲ್ತಾನ್ ಬತ್ತೇರಿಯ ನೆನ್ಮೆನಿ ಫಾರ್ಮ್ ಮತ್ತು ಅದರ ಸುತ್ತಮುತ್ತಲಿನ 193 ಹಂದಿಗಳನ್ನು ಈ ವಾರದಲ್ಲಿ ರೋಗ ಹರಡುವುದನ್ನು ತಡೆಯಲು ನಾಶಪಡಿಸಬೇಕಾಗಿದೆ ಎಂದು ತಿಳಿಸಿದರು.
ವಯನಾಡ್ ಒಂದರಲ್ಲೇ 222 ಹಂದಿ ಸಾಕಣೆ ಕೇಂದ್ರಗಳಲ್ಲಿ ಸುಮಾರು 20 ಸಾವಿರ ಹಂದಿಗಳಲ್ಲಿ ಹರಡಿದೆ. ಅಲ್ಲದೆ ಕಳೆದ ವಾರ, ರೋಗ ಹರಡುವುದನ್ನು ತಡೆಯಲು ವಯನಾಡ್ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲಾಗಿತ್ತು.
ಕಳೆದ ತಿಂಗಳು ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಕೇಂದ್ರವು ಎಚ್ಚರಿಸಿದ ನಂತರ ರಾಜ್ಯ ಸರ್ಕಾರವು ಜೈವಿಕ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿತು.