ಹೊಸದಿಗಂತ ವರದಿ,ಬಾಗಲಕೋಟೆ:
ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಕುಡಿದು ಸಾವನ್ನಪ್ಪಿದ ದಾರುಣ ಘಟನೆ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ತಿಮ್ಮಾಪೂರ ಗ್ರಾಮದ ರೇಖಾ ಬಗಲಿ (28) ತಾಯಿ, ಮಕ್ಕಳಾದ ಸನ್ನಿಧಿ (8), ಸಮೃದ್ಧಿ (5), ಶ್ರೀನಿಧಿ (3) ಮೃತಪಟ್ಟ ದುದರ್ೈವಿಗಳಾಗಿದ್ದಾರೆ. ರೇಖಾ ಇತ್ತೀಚಿಗೆ ಮಾನಸಿಕ ಸ್ಥಿತಿಮಿತ ಕಳೆದುಕೊಂಡಿದ್ದರು ಎಂದು ತಿಳಿದು ಬಂದಿದೆ.
ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಓದು ,ಬೆಳೆಸುವು, ಮದುವೆ ಹೇಗೆ ಎಂದು ಚಿಂತಿಸಿ ಮಾನಸಿಕವಾಗಿ ಬಳಲಿದ್ದಳು ಎಂದು ಹೇಳಲಾಗುತ್ತಿದೆ. ರೇಖಾನ ಗಂಡ ಅಜರ್ುನ ಕಬ್ಬು ಕಟಾವು ಕೆಲಸ ಮಾಡುತ್ತಿದ್ದನು. ತಿಮ್ಮಾಪೂರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಮೃತ ರೇಖಾ ವಾಸವಾಗಿದ್ದಳು.
ಮ್ಯಾಂಗೋ ಜ್ಯೂಸ್ ಬಾಟಲನಲ್ಲಿ ವಿಷ ಹಾಕಿ ಮಕ್ಕಳಿಗೆ ರೇಖಾ ವಿಷ ಹಾಕಿದ್ದಾಳೆ, ಮ್ಯಾಂಗೋ ಜ್ಯೂಸ್ ಬಾಟಲ್ ಸಾವನ್ನಪ್ಪಿದ ಮಕ್ಕಳ ಮುಂದೆ ಬಿದ್ದಿದೆ. ಮಕ್ಕಳಿಗೆ ವಿಷವುಣಿಸಿ ತಾಯಿ ಕೂಡ ವಿಷ ಕುಡಿದು ಸಾವನ್ನಪ್ಪಿದ ದಾರುಣ ಘಟನೆಯ ಸುದ್ದಿಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇನ್ನೂ ಚಿಕ್ಕ ಕಂದಮ್ಮಗಳು ಸಾವನ್ನಪ್ಪಿದ ದೃಶ್ಯ ನೋಡಿ ಗ್ರಾಮಸ್ಥರು ಕಣ್ಣೀರಿಟ್ಟರು.
ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.