SHOCKING| ಕೊಡಗಿನಲ್ಲಿ ಶೂಟ್ಔಟ್: ಕಾಂಗ್ರೆಸ್ ಮುಖಂಡ ಸ್ಥಳದಲ್ಲಿಯೇ ದಾರುಣ ಸಾವು

ದಿಗಂತ ವರದಿ ಮಡಿಕೇರಿ:

ಅಣ್ಣನೇ ತಮ್ಮನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಬೇಗೂರಿನಲ್ಲಿ ನಡೆದಿದೆ.

ಕಾಂಗ್ರೆಸ್ ಮುಖಂಡ ಮಲ್ಲಂಡ ಪ್ರಕಾಶ್ (57) ಎಂಬವರೇ ತನ್ನ ಸೋದರ ಸುಬ್ರಮಣಿ ಅವರಿಂದ‌ ಹತ್ಯೆಗೊಳಗಾದವರಾಗಿದ್ದಾರೆ.

ಬೇಗೂರಿನ ತೋಟದಲ್ಲಿದ್ದ ಪ್ರಕಾಶ್‌ ಅವರಿಗೆ ಸುಬ್ರಮಣಿ ಗುಂಡು ಹೊಡೆದಿರುವುದಾಗಿ ಹೇಳಲಾಗಿದ್ದು, ಘಟನೆಯಲ್ಲಿ ಪ್ರಕಾಶ್ ಸ್ಥಳದಲ್ಲೇ ಸಾವಿಗೀಡಾದರೆ, ಅವರ ಪುತ್ರನೂ ಗಾಯಗೊಂಡು ಮೈಸೂರಿನ‌ ಆಸ್ಪತ್ರೆಗೆ ರವಾನಿಸಲ್ಪಟ್ಟಿದ್ದಾರೆ.

ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!