ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವಾಗಲೂ ಧರ್ಮಯುದ್ಧಕ್ಕೆ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರುಶನ ಪಡೆಯುತ್ತೇ. ಈ ಬಾರಿ ಕೂಡ ಮಂಜುನಾಥನ ಆಶೀರ್ವಾದ ಕೋರಿ ಧರ್ಮಸ್ಥಳಕ್ಕೆ ಆಗಮಿಸಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನನ್ನ ಜೀವನದಲ್ಲಿ ಮಂಜುನಾಥ, ಅಜ್ಜಯ್ಯ,ಈಶ್ವರ, ಗಂಗಾಧರ ಎಲ್ಲ ದೇವರುಗಳು ಅತಿಮುಖ್ಯರು, ಅವರ ಆಶೀರ್ವಾದ ನನ್ನ ಮೇಲಿದೆ. ಈ ಧರ್ಮಯುದ್ಧಕ್ಕೂ ಮುನ್ನ ದೇವರ ಸನ್ನಿಧಿಗೆ ಬಂದಿದ್ದೇನೆ. ಇಲ್ಲಿ ಬಂದು ಆಶೀರ್ವಾದ ಪಡೆದರೆ ಸಾಕಷ್ಟು ಸಕಾರಾತ್ಮಕ ಶಕ್ತಿ ನನ್ನೊಳಗೆ ಹರಿಯುತ್ತದೆ ಎಂದು ಹೇಳಿದ್ದಾರೆ.
ಎಲ್ಲಿಗೆ ಬಂದರೂ ಕಾಂಗ್ರೆಸ್ ಗೆಲ್ಲಲಿ ಎಂದು ಪೂಜೆ ಮಾಡುವವರೂ ಇದ್ದೇ ಇರುತ್ತಾರೆ. ಮಂಜುನಾಥ ನನಗೆ ನುಡಿದಂತೆ ನಡೆದುಕೊಳ್ಳುವ ಸ್ಥೈರ್ಯ ನೀಡಲಿ ಎಂದು ಹೇಳಿದ್ದಾರೆ.