ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿಪಟೂರಿನ ಶ್ರೀ ಕ್ಷೇತ್ರ ದಸರೀಘಟ್ಟದ ಶ್ರೀ ಚೌಡೇಶ್ವರಿದೇವಿ ದೇವಾಲಯದಲ್ಲಿ ನಡೆದ ನವಚಂಡಿಕಾಯಾಗದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಭಾಗವಹಿಸಿ, ಅಮ್ಮನವರಿಗೆ ಕುಂಭಾಭಿಷೇಕ ನೆರವೇರಿಸಿದರು.
ಇದೇ ವೇಳೆ ಶ್ರೀಗಳು ಭಕ್ತಾದಿಗಳಿಗೆ ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭ ಆದಿಚುಂಚನಗಿರಿ ಶಾಖಾಮಠಗಳ ಸ್ವಾಮೀಜಿಗಳವರು ಭಾಗವಹಿಸಿದರು.