ಹೊಸದಿಗಂತ ವರದಿ ತುಮಕೂರು:
ಶ್ರೀ ಸಿದ್ಧಗಂಗಾ ಇಂಜನಿಯರಿಂಗ್ ಕಾಲೇಜಿನ ಹದಿನಾಲ್ಕನೆಯ ಘಟಿಕೋತ್ಸವ ಸೆಪ್ಟೆಂಬರ್ 16 ರಂದು ನೆರವೇರಿಸಿದ ಲಿಲೆ ಎಂದು ಆಡಳಿತಾಧಿಕಾರಿ ಶಿವಕುಮಾರಯ್ಯ ಮತ್ತು ಪ್ರಾಂಶುಪಾಲರಾದ ಎಸ್.ವಿ.ದಿನೇಶ್ ಇಂದು ತಿಳಿಸಿದರು.
ಸಿದ್ಧಗಂಗಾ ಮಠಾಧೀಶರ ಶ್ರೀ ಸಿದ್ಧಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು.ಬೆಂಗಳೂರಿನ ಯುರೋಪಿಯನ್ ಐ.ಟಿ.ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಾದ ಹರೀಶ್ ರವಿ ಘಟಿಕೋತ್ಸವ ಭಾಷಣ ಮಾಡುವರು.
ಎಂಟೆಕ್ ನ 18, ಇಂಜನಿಯರಿಂಗ್ ನ 723, ಬಿಆರ್ಕ್ ನ 34 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯುವವರು.ಕಂಪ್ಯೂಟರ್ ಸೈನ್ಸ್ ಮತ್ತು ಇಂಜನಿಯರಿಂಗ್ ವಿದ್ಯಾರ್ಥಿನಿ ಭೂಮಿಕಾ ಎಸ್.ಪಿ.ಅವರು ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಚಿನ್ನದ ಪದಕದ ಜೊತೆಗೆ ನಾಲ್ಕು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
250 ಪ್ರತಿಷ್ಠಿತ ಕಂಪೆನಿಗಳಿಗೆ 1250 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆಯಾಗಿದ್ದಾರೆ.210ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಾರ್ಷಿಕ ಹತ್ತು. ಲಕ್ಷ ರೂಪಾಯಿಗೂ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ.350 ವಿದ್ಯಾರ್ಥಿಗಳ ಪೇಯ್ಡ್ ಇಂಟರ್ನೆಟ್ ಗೆ ಆಯ್ಕೆ ಆಗಿದ್ದಾರೆ.ಮೋಹಿತ್ ಕುಮಾರ್ ಎಂಬ ವಿದ್ಯಾರ್ಥಿಇನ್ಪ್ಯೂಟ್ ಕಂಪನಿಯಲ್ಲಿ ವಾರ್ಷಿಕ 41.5 ಲಕ್ಷ ರೂಗಳ ವೇತನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.