ಹೊಸದಿಗಂತ ವರದಿ,ಗದಗ:
ಡಿ.ಕೆ.ಶಿವಕುಮಾರ ಅವರು ಈಗಾಗಲೇ ಸೋನಿಯಾಗಾಂಧಿ ಅವರಿಗೆ ಹತ್ತಿರವಾಗಿದ್ದಾರೆ, ಅದೇ ರೀತಿ ಸಿದ್ದರಾಮಯ್ಯ ಅವರು ಹತ್ತಿರವಾಗಲು ಆರ್ಎಸ್ಎಸ್ನ್ನು ವಿನಾಕಾರಣ ಟೀಕಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್ಎಸ್ಎಸ್ ಕೆಣುಕುತ್ತಿರುವ ಸಿದ್ದರಾಮಯ್ಯ ಅವರು ಮೊದಲು ತಮ್ಮ ರಾಜಕೀಯ ಮೂಲ ಯಾವುದು? ಎಂದು ಹೇಳಲಿ, ಆರ್ಎಸ್ಎಸ್ನ್ನು ಟೀಕೆ ಮಾಡುವಷ್ಟು ಸಿದ್ದರಾಮಯ್ಯ ಅವರು ದೊಡ್ಡವರಲ್ಲ, ಅವರು ಮೊದಲು ಆರ್ಎಸ್ಎಸ್ನ ಇತಿಹಾಸ ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದರು.