ಹೊಸದಿಗಂತ ವರದಿ, ವಿಜಯಪುರ:
2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಗುಮ್ಮಟ ನಗರಿಯ ಸವಿತಾ ಗೋಟ್ಯಾಳ 479ನೇ ರ್ಯಾಂಕ್ ಪಡೆದು ಮತ್ತೆ ಸಾಧನೆ ಮಾಡಿದ್ದಾರೆ.
ಐಪಿಎಸ್ ಅಧಿಕಾರಿಯಾಗಿರೋ ಅಕ್ಕ ಅಶ್ವಿನಿ, ಸವಿತಾಗೆ ಪ್ರೇರಣೆಯಾಗಿದ್ದು, ಅಕ್ಕ- ತಂಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಸದ್ಯ ಬಂದಿರೋ ರ್ಯಾಂಕ್ ನಿಂದ ಆದಾಯ ತೆರಿಗೆ ಇಲಾಖೆ ಹುದ್ದೆ ಸಿಗಬಹುದು ಎಂದು ಸವಿತಾಳ ತಂದೆ ಸಿದ್ದಪ್ಪ, ತಾಯಿ ಜಯಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.
ಸವಿತಾ ಈಗಾಗಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 2020ರಲ್ಲಿ 626 ರ್ಯಾಂಕ್ ಪಡೆದು, ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದಾರೆ. ಪ್ರಸ್ತುತ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಡಿಸಿದ್ದಾರೆ. ಇನ್ನಷ್ಟು ರ್ಯಾಂಕ್ ಪಡೆಯಲು ಮತ್ತೊಮ್ಮೆ ಪರೀಕ್ಷೆ ಬರೆಯುವ ಇಂಗಿತ ವ್ಯಕ್ತಪಡಿಸಿದ್ದು, ಕಂದಾಯ ಇಲಾಖೆ ಸೇರಬೇಕು ಎನ್ನುವ ಆಸೆಯಿದೆ ಎಂದು ಪಾಲಕರು ತಿಳಿಸುತ್ತಾರೆ.
ಇಲ್ಲಿನ ಸಿದ್ಧಾರೂಢ ಬಡಾವಣೆಯಲ್ಲಿರುವ ಸವಿತಾ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.