ಹೊಸದಿಗಂತ ವರದಿ,ಬೀದರ್:
ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿರುವ ‘ಪ್ರಜಾಧ್ವನಿ’ ಕಾರ್ಯಕ್ರಮದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ೧೨೦ ಸ್ಥಾನ ಗೆಲ್ಲಲ್ಲ ಅಧಿಕಾರಕ್ಕೆ ಬರಲ್ಲ ಎಂದು ಹೇಳುವ ಬದಲು ಕಾಂಗ್ರೆಸ್ ೧೨೦ ಸ್ಥಾನ ಗೆಲ್ಲಲ್ಲ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದರು. ನಂತರ ವೇದಿಕೆಯಲ್ಲಿದ್ದ ಕಾರ್ಯಕರ್ತರು ಬಿಜೆಪಿ ಎಂದು ಹೇಳಿದ ನಂತರ ತಮ್ಮ ತಪ್ಪಿನ ಅರಿವಾಗಿ ಸರಿಪಡಿಸಿಕೊಂಡರು.
ಇತ್ತ ಸಿಕ್ಕ ಅವಕಾಶವನ್ನು ಬಳಸಿ ಬಿಜೆಪಿ ಐಟಿ ಸೆಲ್ ಸಿದ್ದರಾಮಯ್ಯ ನವರ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂಬ ಹೇಳಿಕೆಯನ್ನು ವೈರಲ್ ಮಾಡಿದೆ.