ಹೊಸದಿಗಂತ ವರದಿ, ಕಲಬುರಗಿ:
ಸಿದ್ದರಾಮಯ್ಯ ಅವರು ಸಿದ್ದರಾಮೋತ್ಸವ ಮಾಡಿಕೊಳ್ಳುತ್ತಾ ಹೋದರೆ, ಭವಿಷ್ಯದಲ್ಲಿ ಅವರು ಉತ್ಸವ ಮೂತಿ೯ಯಾಗುತ್ತಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಯಾವುದೇ ಉತ್ಸವಗಳು ನಡೆಯಲಿ,ಉತ್ಸವ ಮೂತಿ೯ಗಳು ದೆವಾಲಯದ ಹೊರಗಡೆ ಇರಬೇಕು. ಊರೆಲ್ಲಾ ಮೆರವಣಿಗೆ ಮಾಡಿ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಹೊರಗೆ ಇಡುತ್ತಾರೆ.ಇದನ್ನು ಸಿದ್ದರಾಮಯ್ಯ ಅಥ೯ ಮಾಡಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಬಾದಾಮಿಯಲ್ಲಿ ನೆಲೆ ಕಳೆದುಕೊಂಡರು.ಚಾಮುಂಡೇಶ್ವರಿ,ನಲ್ಲೂ ಅವರಿಗೆ ಸ್ಥಾನವಿಲ್ಲ. ಇದು ಒಬ್ಬ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯ ಪರಿಸ್ಥಿತಿ ಎಂದರು.
ಕಾಂಗ್ರೆಸ್ ಪಕ್ಷ ಜನರಿಂದ ತೀರಸ್ಕೃತವಾದ ಪಕ್ಷವಾಗಿದೆ.ನಮ್ಮ ರಾಜ್ಯದಲ್ಲಿ ಸಿಎಂ ಖುಚಿ೯ ಈಗ ಖಾಲಿಯಿಲ್ಲ.ನರೇಂದ್ರ ಮೋದಿ ಎಲ್ಲಿಯವರೆಗೆ ಇರುತ್ತಾರೋ,ಅಲ್ಲಿಯವರೆಗೆ ಬೇರೆಯವರು ಸಿಎಂ ಆಗಲು ಸಾಧ್ಯವಿಲ್ಲ ಎಂದ ಅವರು,ಸಧ್ಯ ಸಿದ್ದರಾಮಯ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.
ಡಿ.ಕೆ.ಶಿವಕುಮಾರ್ ಒಕ್ಕಲಿಗ ಟ್ರಂಪ್ ಕಾಡ್೯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾವು ಬಿಟ್ಟರೆ ತಾನೆ,ಡಿ ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದು ?.ಮುಖ್ಯಮಂತ್ರಿ ಸ್ಥಾನ ಎನೂ ಅವರ ಮನೆ ಕುಚಿ೯ನಾ ? ಎಂದು ತಿರುಗೇಟು ನೀಡಿದ ಅವರು,ಅವರ ಕನಸು ನನಸಾಗಲೂ ನಾವು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಬಲು ಜೋರಾಗಿ ನಡೆದಿದ್ದು, ಒಂದು ಕಡೆ ಸಿದ್ದರಾಮೋತ್ಸವ ಇನ್ನೋಂದೆಡೆ ಡಿಕೆಶಿ ಈ ರೀತಿ ಹೇಳಿಕೆ ನೀಡುತ್ತಿರುವುದು ಎಂದರು.