ಹೊಸದಿಗಂತ ವರದಿ, ವಿಜಯಪುರ:
ನಡೆದಾಡುವ ದೇವರಾದ ಸಿದ್ದೇಶ್ವರ ಶ್ರೀಗಳು ಒಂದು ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಸೈನಿಕ ಶಾಲಾ ಆವರಣದಲ್ಲಿ ಸಿದ್ದೇಶ್ವರ ಶ್ರೀಗಳ ಅಂತಿಮ ದರುಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಪ್ರಪಂಚಕ್ಕೆ ಮಾದರಿ ಆಗಿದ್ದಾರೆ. ಅವರು ಪ್ರವಚನದ ಮೂಲಕ ಸಂದೇಶ ಸಾರಿದವರು. ಸಿದ್ದೇಶ್ವರ ಶ್ರೀಗಳು ಸಾವನ್ನು ಎದುರಿಸಿದ್ದಾರೆ. ಶ್ರೀಗಳು ಅಪಾರ ಭಕ್ತರನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಭಕ್ತರಿಗೂ ಶ್ರೀಗಳ ದರುಶನ ಸಿಗುತ್ತದೆ ಎಂದರು.