ದಿಗಂತ ವರದಿ ವಿಜಯಪುರ:
ಅನಾರೋಗ್ಯಗೊಂಡಿರುವ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಾಡಿ ಮಿಡಿತ ಸ್ವಲ್ಪ ಕಡಮೆಯಾಗಿದ್ದು, ಉಸಿರಾಟ ಕಡಿಮೆ ಆಗುತ್ತಿದೆ ಎಂದು ಡಾ.ಮಲ್ಲಣ ಮೂಲಿಮನಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಮಲ್ಲಣ ಸೋಮವಾರ ಮಧ್ಯಾಹ್ನ ಮಾತನಾಡಿ, ಶ್ರೀಗಳಿಗೆ ಉಸಿರಾಡಲು ತೊಂದರೆ ಆಗುತ್ತಿದ್ದು, ಆಕ್ಸಿಜನ್ ನೀಡುತ್ತಿದ್ದೇವೆ. ಬಿಪಿ ಕಡಿಮೆಯಾಗಿದೆ. ಆಕ್ಸಿಜನ್ ಕಡಿಮೆ ಆಗಿದೆ, ಪಲ್ಸ್ ಕಡಿಮೆ, ನಾಡಿ ಮಿಡಿತ ಕಡಿಮೆಯಾಗಿದೆ. ಆದರೂ ಸ್ಬೆಬಲ್ ಆಗಿದ್ದಾರೆ ಎಂದರು.