ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಕಾರ್‌ ಒದಗಿಸಿದ ಇಬ್ಬರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪಂಜಾಬ್‌ ನ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪಂಜಾಬ್ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಫತೇಹಾಬಾದ್‌ನ ಭಿರ್ದನಾ ಗ್ರಾಮದಮೇಲೆ ದಾಳಿ ನಡೆಸಿದ ಪಂಜಾಬ್‌ ಪೋಲೀಸರ ತಂಡವು ಪವನ್ ಬಿಷ್ಣೋಯ್ ಮತ್ತು ಖಾನ್ ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮೂಸೆವಾಲಾ ಶೂಟೌಟ್‌ಗೆ ಹಂತಕಿಗಳಿಗೆ ಬೊಲೆರೋ ಜೀಪ್‌ ಒದಗಿಸುವಲ್ಲಿ ಇವರಿಬ್ಬರ ಪಾತ್ರವಿದೆ ಎನ್ನಲಾಗಿದೆ.

ಮೇ 29ರಂದು ಸಿಧು ಅವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಸಾವನ್ನಪ್ಪಿದ ಸಿಧು ಅವರ ದೇಹದಿಂದ 25ಕ್ಕೂ ಹೆಚ್ಚಿನ ಬುಲೆಟ್‌ ಗಳು ಪತ್ತೆಯಾಗಿದ್ದು AN-94 ಅಸಾಲ್ಟ್ ರೈಫಲ್ ಸೇರಿದಂತೆ ಕನಿಷ್ಠ ಮೂರು ಬಂದೂಕುಗಳನ್ನು ಬಳಸಲಾಗಿದೆ ಹಾಗೂ ಸ್ಥಳದಲ್ಲಿದ್ದ ಮೂವತ್ತು ಖಾಲಿ ಬುಲೆಟ್ ಕೇಸಿಂಗ್‌ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!