ಭಾರೀ ಮಳೆಗೆ ನಲುಗಿದ ಸಿಲಿಕಾನ್ ಸಿಟಿ: ರಕ್ಷಣೆಗೆ NDRF ತಂಡ ನಿಯೋಜನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶ ನಲುಗಿ ಹೋಗಿದೆ. ಮಳೆಯಿಂದಾಗಿ ನೆರೆಹೊರೆಯ ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡುತ್ತಿದೆ.

ಹಲವಾರು ರಸ್ತೆಗಳು ತೀವ್ರವಾಗಿ ಜಲಾವೃತವಾಗಿದ್ದು, ಪ್ರವಾಹದಂತಹ ಪರಿಸ್ಥಿತಿಗೆ ಎದುರಾಗಿದೆ.ಪ್ರವಾಹ ಪೀಡಿತ ಪ್ರದೇಶಗಳಿಂದ ನಿವಾಸಿಗಳನ್ನು ರಕ್ಷಿಸಲು ಎನ್ ಡಿಆರ್‌ ಎಫ್ ತಂಡಗಳನ್ನು ನಿಯೋಜಿಸಿಲಾಗಿದೆ.

ಎಸ್ಡಿಆರ್‌ಎಫ್, ಅಗ್ನಿಶಾಮಕ ಸೇವೆಯು ಸಹ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಜನರನ್ನು ಸ್ಥಳಾಂತರಿಸಲು ಬಿಬಿಪಿಎಂ ಟ್ರ್ಯಾಕ್ಟರ್ಗಳನ್ನು ಸಹ ಬಳಸುತ್ತಿದೆ ಎಂದು ಬೆಂಗಳೂರಿನ ಸಹಾಯಕ ಕಮಾಂಡೆಂಟ್ ಜೆ ಸೆಂಥಿಲ್ ಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!