ಹೊಸದಿಗಂತ ವರದಿ,ಕಲಬುರಗಿ:
ರಾಜ್ಯದಲ್ಲಿ ಹಿಂದುಗಳ ವೇಷವನ್ನು ಹಾಕಿಕೊಂಡು ಹಿಂದುಗಳನ್ನು ಮುಗಿಸುವ ಸಂಚು ನಡೆಯುತ್ತಿದೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಕರುಣೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಅನೇಕ ಕಡೆ ಹಿಂದುಗಳ ವೇಷದಲ್ಲಿ ಮುಸ್ಲಿಂರು ಬಿಕ್ಷೆ ಬೇಡುತ್ತಿದ್ದಾರೆ. ಸಾಧು ಸಂತರ ವೇಷ ಹಾಕಿಕೊಂಡು ಮುಸ್ಲಿಂರು ಅಡ್ಡಾಡುತ್ತಿದ್ದಾರೆ. ಅಲ್ಲಿನ ವ್ಯವಸ್ಥೆ ಅರ್ಥ ಮಾಡಿಕೊಂಡು ದಾಳಿ ನಡೆಸುವ ಸಂಚು ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಗಂಭೀರವಾಗಿ ಆರೋಪಿಸಿದರು.
ಕೂಡಲೇ ರಾಜ್ಯದ ಪೊಲೀಸ್ ಇಲಾಖೆ ಇಂತಹ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ರಾಜ್ಯದ ಕರಾವಳಿ ಭಾಗ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ. ಪಕ್ಕದಲ್ಲಿ ಕೇರಳ ರಾಜ್ಯ ಇರುವುದರಿಂದ ಕರಾವಳಿ ಬಹುಭಾಗ ಉಗ್ರರ ಸ್ವರ್ಗವಾಗಿ ನಿರ್ಮಾಣವಾಗಿದೆ ಎಂದರು.
ಮುಸ್ಲಿಂ ಭಯೋತ್ಪಾದಕರು ಇದೀಗ ಹಿಂದು ಸಮಾಜವನ್ನು ಗುರಿ ಮಾಡಿಕೊಂಡು, ಮುಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.