ರಾಮಮಂದಿರ ಭಾವಚಿತ್ರ ಹಿಡಿದು ಸ್ಕೈಡೈವಿಂಗ್: ವಿಡಿಯೋ ವೈರಲ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ. 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ವಿಜಯಪುರದ ಯುವಕರು ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದ್ದಾರೆ.

ನಾಲ್ವರ ತಂಡ, ಬ್ಯಾಂಕಾಕ್​ನ ಖೋಯಾಯ್ ಪ್ರದೇಶಕ್ಕೆ ತೆರಳಿದ್ದು, 13 ಸಾವಿರ ಅಡಿ ಎತ್ತರದಿಂದ ಜೈ ಶ್ರೀರಾಮ ಎಂದು ಬರೆದಿರುವ ರಾಮ ಮಂದಿರದ ಫೋಟೊ ಹಾಗೂ ಪ್ರಧಾನಿ ಮೋದಿಯ ಭಾವಚಿತ್ರವಿರುವ ಬ್ಯಾನರ್ ಹಿಡಿದು ಸ್ಕೈಡೈವಿಂಗ್ ಮಾಡಿದ್ದಾರೆ.

ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠನ ನೇತೃತ್ವದಲ್ಲಿ, ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಹಿಮಾನಶೂ ಸಾಬಳೆ ಈ ಸ್ಕೈಡೈವಿಂಗ್ ಮಾಡಿದ್ದಾರೆ. ಶ್ರೀರಾಮನ ಹೆಸರು ಇಡಿ ಜಗತ್ತಿಗೆ ಮಾದರಿಯಾಗಿದೆ ಹಾಗೂ ಅವರ ಹೆಸರು ಆಗಸದಲ್ಲೂ ಹಾರಬೇಕು ಎಂದು ಯುವಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!