ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ತಡರಾತ್ರಿಯಿಂದ ಕರಾವಳಿ ಭಾಗದ ಹಲವೆಡೆಗಳಲ್ಲಿ ಮತ್ತೆ ಕುಂಭದ್ರೋಣ ಮಳೆಯಾಯಿಂದಾಗಿ ನೆರೆ ಸೃಷ್ಟಿಯಾಗಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮುಂಭಾಗ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಬಂದೊದಗಿದೆ.
ಕದ್ರಿಕಂಬಳ, ಕೊಟ್ಟಾರ ಚೌಕಿ ಸಹಿತ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ.
ಪಾಂಡೇಶ್ವರ ಶಿವನಗರದಲ್ಲಿ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾಗದೆ ಪರದಾಡುವಂತಾಗಿದೆ.
ಮನೆ ಮುಂದಿರುವ ವಾಹನಗಳು ಮಳೆ ನೀರಿನಲ್ಲಿ ಸಂಪೂರ್ಣ ಮುಳುಗಿರುವ ದೃಶ್ಯಗಳು