ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರದ ಭವಿಷ್ಯ ಏನಾದರೂ ಆಗಬಹುದು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಇಲ್ಲಿ ವಿಶ್ವಾಸ ಇಲ್ಲ, ಪಕ್ಷ ಕಟ್ಟೋಕೆ ಬೇಕಿರೋದು ವಿಶ್ವಾಸ ಅದೇ ಇಲ್ಲದ ಮೇಲೆ ಏನಾದರೂ ಆಗಬಹುದು, ಬಹಳ ಕಷ್ಟಕರ ಸ್ಥಿತಿಗೆ ಕಾಂಗ್ರೆಸ್ ಸಿಲುಕಲಿದೆ. ಅವರು ಘೋಷಿಸಿರುವ ಗ್ಯಾರೆಂಟಿಗಳನ್ನು ಜಾರಿಗೆ ತರೋದು ಅಷ್ಟು ಸುಲಭದ ಕೆಲಸ ಅಲ್ಲ, ಮಾಡಲಿ ನಂತರ ಮಾತನಾಡುವೆ ಎಂದಿದ್ದಾರೆ.
ಗ್ಯಾರೆಂಟಿ ಜಾರಿ ಮಾಡದೇ ಜನರಿಗೆ ಟೋಪಿ ಹಾಕಿದ್ರೆ ಸುಮ್ಮನಿರೋದಿಲ್ಲ. ನಡೆದಂತೆ ನುಡಿಯಬೇಕು ಎಂದಿದ್ದಾರೆ.