ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಮಾಡಲಿಲ್ಲ ಎಂದು ಕೋಪಗೊಂಡ ಮಗ ತಂದೆಯ ತಲೆ ಕಡಿದ ಅಮಾನವೀಯ ಘಟನೆ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಆದಿಲಾಬಾದ್ ನ ಪಿಂಜಾರಿಗುಟ್ಟಾ ಕಾಲೋನಿಯ ಅಪ್ಪಲ ಗಣಪತಿ ಮೃತ ದುರ್ದೈವಿ. ಸರ್ಕಾರಿ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ
ಗಣಪತಿಯವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ಕಿರಿಯ ಮಗ ಅನ್ವೇಶ್ ಯಾವುದೇ ಕೆಲಸ ಮಾಡದೆ ಕಾಲಿಯಿರುವ ಸೋಮಾರಿ. ಕೆಲಸವಿಲ್ಲದಿದ್ದರೂ ತನಗೆ ಮದುವೆ ಮಾಡುವಂತೆ ತನ್ ತಂದೆಯೊಂದಿಗೆ ಸದಾ ಜಗಳ ಕಾಯುತ್ತಿದ್ದ. ಇದೇ ವಿಚಾರಕ್ಕೆ ರಾತ್ರಿ ತಂದೆ ಮತ್ತು ಮಗನ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದೆ ಕೂಡಲೇ ಅನ್ವೇಶ್, ಕುಡುಗೋಲಿನಿಂದ ಅಪ್ಪನ ತಲೆ ಕತ್ತರಿಸಿದ್ದಾನೆ. ಗಣಪತಿ ಅಳಿಯ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.