ಬಿಜೆಪಿ ಮಂಡಲ ಕಚೇರಿಯಲ್ಲಿ ಪಕ್ಷದ ಮಂಡಲ ವಿಸ್ತಾರಕ ಯೋಜನೆಯ ವಿಶೇಷ ಕಾರ್ಯಗಾರ

ಹೊಸದಿಗಂತ ವರದಿ, ಅಂಕೋಲಾ:

ಭಾರತೀಯ ಜನತಾ ಪಕ್ಷದ ಮಂಡಲ ವಿಸ್ತಾರಕ ಯೋಜನೆ ಕುರಿತು ವಿಶೇಷ ಕಾರ್ಯಾಗಾರ ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ನಡೆಯಿತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷದ ಬಲ ಹೆಚ್ಚಿಸುವ ಚಟುವಟಿಕೆಗಳು ಇಂದಿನಿಂದಲೇ ಆರಂಭವಾಗಬೇಕಿದೆ ಎಂದರು.
ತಳಮಟ್ಟದ ಸಂಘಟನೆ ಮೂಲಕ ಮಂಡಲದ ಬಲ ಹೆಚ್ಚಿಸುವ ಕೆಲಸಗಳಿಗೆ ವೇಗ ನೀಡಬೇಕಿದ್ದು ಆ ಮೂಲಕ ಮಂಡಲದ ವಿಸ್ತಾರ ಬೆಳೆಸಬೇಕಿದೆ ಎಂದ ಅವರು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ, ಮಂಡಲ ಅಧ್ಯಕ್ಷ ಸಂಜಯ ನಾಯ್ಕ,
ಪ್ರಮುಖರುಗಳಾದ ಭಾಸ್ಕರ ನಾರ್ವೇಕರ್, ನಾಗರಾಜ ನಾಯಕ, ತೊರ್ಕೆ, ರಾಮಚಂದ್ರ ಭಾಗ್ವತ್, ಎನ್. ಎಸ್. ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!