ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲಾ ಪ್ರಾಣಪ್ರತಿಷ್ಠೆ ಕಾರ್ಯವನ್ನು ನೆರವೇರಿಸಲು ಭಗವಾನ್ ಶ್ರೀರಾಮನೇ ಪ್ರಧಾನಿ ಮೋದಿಗೆ ಅವಕಾಶ ನೀಡಿದ್ದಾನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ನನಗೆ ಆಹ್ವಾನ ಸಿಕ್ಕಿದ್ದು ಖುಷಿಯಾಗಿದೆ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಪ್ರಧಾನಿ ಮೋದಿ ರಾಮಲಲಾ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇದು ಅವರ ಸೌಭಾಗ್ಯ. ಎಲ್ಲರಿಗೂ ದೇವರು ಇಂಥ ಅವಕಾಶ ನೀಡುವುದಿಲ್ಲ, ಅವರಿಗೇ ಈ ಅವಕಾಶ ಸಿಕ್ಕಿದೆ ಎಂದಾದರೆ ಅವರು ಅದೃಷ್ಟವಂತರು ಎಂದಿದ್ದಾರೆ.