ಜುಲೈನಲ್ಲಿ ಎರಡು ದಿನಗಳ ಕಾಲ ಶೃಂಗೇರಿ ಶ್ರೀಗಳ ತುಮಕೂರು ಪ್ರವಾಸ

ಹೊಸದಿಗಂತ ವರದಿ ತುಮಕೂರು:‌ 

ಶೃಂಗೇರಿಯ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳು ಜುಲೈ 7ಮತ್ತು8 ರಂದು ತುಮಕೂರಿಗೆ ಆಗಮಿಸಲಿದ್ದಾರೆ ಎಂದು ಶಂಕರಸೇವಾ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

ಜುಲೈ 7ರಂದು ಸಂಜೆ 4.30ರ ವೇಳೆಗೆ ತುಮಕೂರಿಗೆ ಆಗಮಿಸುವ ಶೃಂಗೇರಿ ಶ್ರೀಗಳನ್ನು ಬಿ.ಹೆ.ಹೆಚ್.ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮಂಗಳ ವಾಧ್ಯಗಳೊಂದಿಗೆ ಶೃಂಗೇರಿ ಮಠಕ್ಕೆ ಕರೆತರಲಾಗುವುದು. ಧೂಳಿ ಪಾದಪೂಜೆಯ ನಂತರ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಗುವುದು. ನಂತರ ಶ್ರೀಗಳು ಚಂದ್ರಮೌಳೇಶ್ವರ ಪೂಜೆ ನೆರವೇರಿಸಿ ಭಕ್ತರನ್ನು ಆಶೀರ್ವದಿಸುವರು. ಜುಲೈ 7 ರಂದು ಶ್ರೀಗಳ ಸಮ್ಮುಖದಲ್ಲಿ ರುದ್ರ ಹೋಮ ನಡೆಯಲಿದೆ. ನಂತರ ಶ್ರೀಗಳು ಫಲ ಮಂತ್ರಾಕ್ಷತೆ ನೀಡುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!