ಹೊಸದಿಗಂತ ವರದಿ, ಕಲಬುರಗಿ
ರಾಜ್ಯ ಸಕಾ೯ರ ಮಸೀದಿಗಳ ಮೇಲಿನ ಮೈಕ್ ತೆರವಿಗೆ ಮುಂದಾಗದ ಹಿನ್ನೆಲೆಯಲ್ಲಿ ಮೇ. 9 ರಿಂದ ಮಸೀದಿಗಳ ಮುಂಭಾಗದಲ್ಲಿ ಹನುಮಾನ್ ಚಾಲಿಸ್ ಪಠಣ ಮಾಡಲಾಗುವುದು ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಸೀದಿಗಳಲ್ಲಿ ಮೈಕ್ ತೆರವುಗೊಳಿಸುವ ಕುರಿತಾಗಿ ನ್ಯಾಯಾಲಯದ ಆದೇಶವನ್ನು ಅನುಷ್ಠಾನಕ್ಕೆ ತನ್ನಿ ಎಂದು ನಾವು ಸರಕಾರಕ್ಕೆ ಮೇ.9ನೇ ತಾರೀಕಿನ ವರೆಗೆ ಗಡುವು ನೀಡಿದ್ದೇವು. ಆದರೆ, ಇಲ್ಲಿಯವರೆಗೆ ಮಸೀದಿ ಮೇಲಿನ ಮೈಕ್ (ಧ್ವನಿವಧ೯ಕ) ತೆರವಿಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದರು.
ಬರುವ ಮೇ 9ರಂದು ಮಸೀದಿಗಳ ಮುಂದೆ ನಾವು ಮೈಕ್ ಗಳನ್ನು ಇರಿಸಿ ಹನುಮಾನ್ ಚಾಲಿಸ್ ಓದುತ್ತೇವೆ. ಮಸೀದಿಗಳ ಮುಂದೆ ದೊಡ್ಡ ದೊಡ್ಡ ಧ್ವನಿವರ್ದಕಗಳನ್ನು ಇರಿಸಿ ಓದುತ್ತೇವೆ ಎಂದರು.
ಈ ಪ್ರಕ್ರಿಯೆಯಲ್ಲಿ ಯಾವುದೇ ಅನಾಹುತ ಘಟಿಸಿದರೂ ಅದಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಲಿದೆ ಎಂದರು. ಎಲ್ಲಾ ಜಿಲ್ಲಾ ಕೇಂದ್ರ,ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿಯೂ ಶ್ರೀ ರಾಮ ಸೇನೆ ಈ ಪಯಾ೯ಯ ದಾರಿ ಅನುರಿಸಲಿದೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಅವರಿಗೆ ಮಸೀದಿಗಳಿಂದ ಮೈಕ್ ತೆಗೆಸಲು ಸಾಧ್ಯವಾದರೆ, ಬಸವರಾಜ ಬೊಮ್ಮಾಯಿ ಅವರಿಂದ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಎನೇ ಆದರೂ ಸರಿ ಮೇ, 9ರಂದು ರಾಜ್ಯಾದ್ಯಂತ ಶ್ರೀ ರಾಮ ಸೇನೆ ಅಭಿಯಾನ ಪ್ರಾರಂಭಿಸಲಿದೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ