ಮತ್ತೆ ವಿವಾದದಲ್ಲಿ ಸಿಲುಕಿದ ಜೈ ಭೀಮ್‌ ತಂಡ: ನಟ ಸೂರ್ಯ, ನಿರ್ದೇಶಕರ ಮೇಲೆ ಎಫ್‌ ಐಆರ್‌ ದಾಖಲಿಸಲು ಆದೇಶ ನೀಡಿದ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ವಕೀಲನೊಬ್ಬನ ಕಥೆಯಾದ ಜೈ ಬೀಮ್‌ ಚಿತ್ರದ ವಿರುಧ್ಧ ಮತ್ತೆ ಆಕ್ಷೇಪ ವ್ಯಕ್ತವಾಗಿದ್ದು ನಟ ಸೂರ್ಯ, ಮತ್ತು ಅವರ ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶಕ ಗ್ನಾನವೇಲ್‌ ವಿರುದ್ಧ ಎಫ್‌ ಐ ಆರ್‌ ದಾಖಲಿಸುವಂತೆ ತಮಿಳುನಾಡು ಕೋರ್ಟ್ ಆದೇಶ ಮಾಡಿದೆ. ‌

ಚಿತ್ರದಲ್ಲಿ ವನ್ನಿಯಾರ್‌ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ ಎಂದು ಆರೋಪಿಸಿ ರುದ್ರ ವನ್ನಿಯಾರ್‌ ಸೇನೆಯು ದೂರು ನೀಡಿದ್ದು ಚಿತ್ರತಂಡವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಹೀಂದ ಚಿತ್ರವನ್ನು ಬಿಡುಗಡೆ ಮಾಡುವಾಗಲೂ ʼವಿವಾದಿತʼ ದೃಶ್ಯಗಳನ್ನು ಕಟ್‌ ಮಾಡುವಂತೆ ವನ್ನಿಯಾರ್‌ ಸಮುದಾಯವು ಆಗ್ರಹಿಸಿತ್ತು. ಜೊತೆ 5 ಕೋಟಿ ಪರಿಹಾರ ನೀಡಿ ಚಿತ್ರತಂಡವು ಸಮುದಾಯದವರ ಬಳಿ ಬೇಷರತ್‌ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು.

ಈ ಹಿಂದೆಯೂ ಚಿತ್ರವು ಆಕ್ಷೇಪ ಎದುರಿಸಿದ್ದು ಚಿತ್ರದಲ್ಲಿ ಪ್ರಕಾಶ್‌ ರಾಜ್‌ ಹೀಮದಿ ಮಾತನಾಡಿದ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಹೊಡೆಯುವ ದೃಶ್ಯವು ಹಿಂದಿ ಭಾಷಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಹಲವರು ಚಿತ್ರದ ಕುರಿತು ಪ್ರಶಂಸನೆ ಮಾಡಿದ್ದರು, ಚಿತ್ರರಂಗವೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಆಸ್ಕರ್‌ ಆಯ್ಕೆಪಟ್ಟಿಗೂ ಕಳುಹಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!