ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಅಸಾನ್ಸೊಲ್ನಲ್ಲಿ ಹೊದಿಕೆ ವಿತರಣೆ ವೇಳೆ ಕಾಲ್ತುಳಿತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.
ಅಸಾನ್ಸೊಲ್ನಲ್ಲಿ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ. ನಾನು ಇದ್ದಷ್ಟು ಸಮಯ ಎಲ್ಲವೂ ಸರಿಯಿತ್ತು. ಸ್ವಯಂ ಸೇವಕರು, ಪೊಲೀಸ್ ಭದ್ರತೆ ಇತ್ತು. ನಾನು ಹೊರಟ ನಂತರ ಪೊಲೀಸ್ ಭದ್ರತೆ ಹಿಂಪಡೆಯಲಾಗಿದೆ ಆ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ವಿಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ನಾನು ಹೊರಟ ನಂತರ ಸ್ವಯಂ ಸೇವಕರೂ ಹೊರಟಿದ್ದಾರೆ. ಆನಂತರ ಆಯೋಜಕರಿಗೆ ಎಲ್ಲವನ್ನೂ ನಿಭಾಯಿಸುವುದು ಕಷ್ಟವಾಗಿದೆ. ಜನಸಂದಣಿ ಹೆಚ್ಚಾಗಿತ್ತು ಹಾಗಾಗಿ ನೂಕುನುಗ್ಗಲಿನಿಂದ ಅವಘಡ ಸಂಭವಿಸಿದೆ. ಇಲ್ಲಿ ಯಾರನ್ನೂ ದೂರಲು ಆಗುವುದಿಲ್ಲ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಗಾಯಗೊಂಡವರ ಕುಟುಂಬದ ಜತೆ ನಾವಿದ್ದೇವೆ. ಅಗತ್ಯ ನೆರವು ನೀಡಲಿದ್ದೇವೆ ಎಂದಿದ್ದಾರೆ.
ಸುವೇಂದು ಅಧಿಕಾರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮಗು ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ತೃಣಮೂಲ ಸಂಸದ ಕಾಕೊಲಿ ಘೋಶ್ ದಸ್ತಿದಾರ್ ಟ್ವೀಟ್ ಮಾಡಿದ್ದಾರೆ.