ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅದ್ಧೂರಿ ಪ್ರಚಾರ ಆರಂಭಿಸಿದ್ದು, ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಮತದಾರರ ಮೇಲೆ ತಮ್ಮ ಛಾಪು ಮೂಡಿಸಿದ್ದಾರೆ.
ಬಿಜೆಪಿ ಘಟಕ ಜನವಾಹಿನಿ ಹೆಸರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರಚಾರ ಆರಂಭಿಸಿದೆ, ನಿನ್ನೆ ಬೆಂಗಳೂರಿನಿಂದ ರೋಡ್ ಶೋ ಆರಂಭವಾಗಿದ್ದು, ೧೧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಾಗಿದೆ.
ಇಂದು ಕೇಂದ್ರ ಬಿಜೆಪಿ ನಾಯಕರೂ ಕೂಡ ರೋಡ್ ಶೋ ನಡೆಸಲು ಮುಂದಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟ, ಹಾಗೂ ಹೊಸಕೋಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ತದನಂತರ ದೇವನಹಳ್ಳಿಯಲ್ಲಿ ಬಿಜೆಪಿ ಸಭೆ ನಡೆಯಲಿದ್ದು, ಮುಗಿಸಿ ದೆಹಲಿಗೆ ವಾಪಾಸ್ ಆಗಲಿದ್ದಾರೆ.
ಇನ್ನು ಚಾಣಕ್ಯ ಅಮಿತ್ ಶಾ ಬೆಳಗ್ಗೆ ಮೈಸೂರಿಗೆ ಭೇಟಿ ನೀಡಲಿದ್ದು, ಚಾಮುಂಡಿ ತಾಯಿ ದರುಶನ ಪಡೆಯಲಿದ್ದಾರೆ. ತದನಂತರ ಗುಂಡ್ಲುಪೇಟೆ, ಆಲೂರಿನಲ್ಲಿ ಪ್ರಚಾರ ಮುಗಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ನಾಳೆ ಅಮಿತ್ ಶಾ ಹುಬ್ಬಳಿ ಪ್ರವಾಸ ಆರಂಭವಾಗಲಿದೆ.