ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ,ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಎಡವಿದ್ದಾರೆ.
ಮೂರನೇ ಅತೀ ಮುಖ್ಯ ಪಂದ್ಯದಲ್ಲಿಯೇ ನಿರಾಸದಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಈ ಕಾರಣ ಇನ್ನು ಮುಂದಾದರು ಬೆಂಚ್ ಕಾಯುತ್ತಿರುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡಿ ಎಂದುಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುವ ಮೂಲ ಅಸಮಾಧಾನ ಹೊರಹಾಕಿದ್ದಾರೆ.
ಕೇಪ್ಟೌನ್ ಟೆಸ್ಟ್ನಲ್ಲಿ ಅಜಿಂಕ್ಯ ರಹಾನೆ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ, 2ನೇ ಇನ್ನಿಂಗ್ಸ್ನಲ್ಲಿ ಒಂದು ರನ್ಗೆ ವಿಕೆಟ್ ಒಪ್ಪಿಸಿದರು. ಇತ್ತ ಪೂಜಾರ ಮೊದಲ ಇನ್ನಿಂಗ್ಸ್ನಲ್ಲಿ 43 ರನ್ಗಳಿಸಿದರೂ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 6 ಇನ್ನಿಂಗ್ಸ್ಗಳಲ್ಲಿ ರಹಾನೆ ಕೇವಲ 48, 20, 0, 58, 9, 0 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. 2020 ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ್ದು ಬಿಟ್ಟರೆ ಆ ಮೇಲೆ ಕಳೆದ 30 ಇನ್ನಿಂಗ್ಸ್ಗಳಲ್ಲಿ ಕೇವಲ 3 ಅರ್ಧಶತಕ ಸಿಡಿಸಿದ್ದಾರೆ.021ರಲ್ಲಿ 11 ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ, 6 ಬಾರಿ 20 ರನ್ಗಳಿಸಲೂ ಕೂಡ ವಿಫಲರಾಗಿದ್ದಾರೆ.
ಅದೇ ರೀತಿ ಪೂಜಾರ ಕೂಡ 2019 ಜನವರಿಯಲ್ಲಿ ಆಸೀಸ್ ವಿರುದ್ಧ ಕೊನೆಯ ಬಾರಿ ಶತಕ ಸಿಡಿಸಿದ್ದರು. ಆ ಬೇಲಿಕೇ ಒಂದು ಬಾರಿಯೂಶತಕ ಸಿಡಿಸಿಲ್ಲ . ಇನ್ನು 2021ರಲ್ಲಿ ಪೂಜಾರ ಕೂಡ 11 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ನೀಡಿದ್ದಾರೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಹೇಳುವಂತಹ ಯಾವುದೇ ರೀತಿಯ ಪ್ರದರ್ಶನ ನೀಡಿಲ್ಲ.
ಭಾರತದ ತಂಡದ ಅನುಭವ ಬ್ಯಾಟ್ಸ್ ಮ್ಯಾನ್ ಗಳೇ ಅತೀ ಮುಖ್ಯ ಪಂದ್ಯದಲ್ಲಿ ಕೈಗೊಂಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಹೀಗಾಗಿ ಮುಂದಿನ ಸರಣಿಯಲ್ಲಾದರೂ ಉತ್ತಮ ಫಾರ್ಮ್ನಲ್ಲಿದ್ದರುವ ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಬ್ಮನ್ ಗಿಲ್ ಅಂತಹ ಯುವ ಆಟಗಾರರಿಗೆ ಅವಕಾಶ ಕೊಟ್ಟುಭಾರತದ ಗೆಲುವಿಗೆ ಸಾಥ್ ನೀಡುವ ತಂಡವನ್ನು ಬಲಿಷ್ಠಗೊಳಿಸಲು ನೆರವಾಗಬೇಕೆಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
Iyer who scored a century recently. Despite that, he was not a part of the playing XI. It is a pity that the real talent was not given a chance in the affair of two failure players.
The #BCCI , coach, captain and chairman have all remained blind. #SAvsIND #SAvsIND #rahane pic.twitter.com/35IWkLYp04
— Deepa (தீபா)🇮🇳 (@Deepa_Gurukkal) January 13, 2022
India have to win this ongoing test match as i would be a farewell for pujara & Rahane.
Thank you for all the memories 🙌🏼#Rahane #pujara #SAvsIND pic.twitter.com/fhTmu818ZI
— Adi🇦🇺 (@thinkcricket49) January 13, 2022
There are so many good players fighting for that no.5 slot – Shreyas Iyer, Vihari, Suryakumar, Gill – that Ajinkya Rahane’s time has come.
But this narrative that’s developed that he’s some fraud who can’t hold a bat is really nasty. Insult is not analysis.#SAvIND🏏🇿🇦🇮🇳#WTC23
— Nakul Pande (@NakulMPande) January 13, 2022