ಅಣ್ಣನ ಸಾವಿನಿಂದ ನೊಂದ ತಮ್ಮ: ರಮೇಶ ಕತ್ತಿ ಆರೋಗ್ಯದಲ್ಲಿ ಏರುಪೇರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಚಿವ ಉಮೇಶ್ ಕತ್ತಿ ನಿಧನರಿಂದ ತೀವ್ರವಾಗಿ ನೊಂದಿರುವ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿ , ಇಸಿಜಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಉಮೇಶ ಕತ್ತಿ ನಿಧನ ಬಳಿಕ ರಮೇಶ ಕತ್ತಿ ನಿನ್ನೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಇಂದು ಬೆಳಗ್ಗೆ ಅಣ್ಣನ ಪಾರ್ಥಿವ ಶರೀರದ ಜೊತೆ ಆಗಮಿಸಿದ್ದರು.‌ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್​ನಲ್ಲಿ ಅಂತಿಮ ದರ್ಶನದ ವೇಳೆ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ.
ಅಣ್ಣನ ಸಾವಿನ ಬಳಿಕ ನೊಂದಿರುವ ರಮೇಶ ಕತ್ತಿ, ನಿನ್ನೆಯಿಂದಲೂ ಕಣ್ಣೀರು ಹಾಕುತ್ತಲೇ ಇದ್ದಾರೆ. ರಮೇಶ ಕತ್ತಿ ಮಾಜಿ ಸಂಸದ ಹಾಗೂ ಹಾಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!