ಐವರ ಆತ್ಮಹತ್ಯೆ ಪ್ರಕರಣ: ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಪರಮೇಶ್ವರ್‌ ಭೇಟಿ, ಅಂತಿಮ ನಮನ

ಹೊಸದಿಗಂತ ವರದಿ ತುಮಕೂರು:

ಭಾನುವಾರ ಸಂಜೆ ಸಾಲದ ಬಾಧೆ ಮತ್ತು ಅಕ್ಕಪಕ್ಕದವರ ಕಿರುಕುಳ ತಾಳಲಾರದೆ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವಪರಮೇಶ್ವರ್‌ ಮಾತನಾಡಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು, ಶವಾಗಾರದಲ್ಲಿರುವ ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, 1.5ಲಕ್ಷ ರೂಗಳ ಸಾಲ ತೀರಿಸಲಾಗದೆ ತನ್ನ ಕುಟುಂಬದ ನಾಲ್ವರ ಜೊತೆ ಮನೆ ಯಜಮಾನ ಸಾವಿಗೆ ಶರಣಾಗಿರುವುದು ದುರಂತ ಎಂದರು.

ಮೃತವ್ಯಕ್ತಿ ತಾನು ಸಾಯುವ ಮುನ್ನ ಬರೆದಿರುವ ಪತ್ರ ಮತ್ತು ವಿಡಿಯೋವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ವಿಚಾರಣೆ ನಂತರ ಎಲ್ಲವೂ ಹೊರಬರಲಿದೆ ಎಂದರು.

ಸಚಿವರೊಂದಿಗೆ ಮಾಜಿ ಸಚಿವ ಸೊಗಡು ಶಿವಣ್ಣ. ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಅಶೋಕ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!